Udupi: ಮಂಗಳೂರು (Mangalore) -ಮಡಗಾಂವ್ ಎಕ್ಸ್ಪ್ರೆಸ್ ರೈಲಿನ ಸಮಯ ಬದಲಾವಣೆಯಾಗಿದ್ದು, ಭಾರತೀಯ (Mlore-MAO Train Timing Change) ರೈಲ್ವೆ ಇಲಾಖೆ ಆದೇಶ
ಹೊರಡಿಸಿದೆ. ಬೈಂದೂರು ರೈಲು ಯಾತ್ರಿ ಸಂಘ ಈ ಬಗ್ಗೆ ಹೋರಾಟ ನಡೆಸಿದೆ. ನಿರಂತರ ಹೋರಾಟಕ್ಕೆ ಜಯ ಸಂದಿದೆ. ಹೊಸ ವೇಳಾಪಟ್ಟಿ ಕುರಿತ ಮಾಹಿತಿ ಈ ರೀತಿಯಾಗಿದೆ.
ಗೋವಾದಿಂದ (Goa) ಮಂಗಳೂರಿಗೆ ಆಗಮಿಸುವ ಮಡಗಾಂವ್-ಮಂಗಳೂರು ಎಕ್ಸ್ಪ್ರೆಸ್ ರೈಲು ಸಮಯ ಬದಲಾವಣೆ ಒತ್ತಾಯಿಸಿ ಭಾರತೀಯ ರೈಲ್ವೆ ಬೋರ್ಡ್ಗೆ (Bainduru) ಬೈಂದೂರು ರೈಲುಯಾತ್ರಿ
ಸಂಘ ಅಧ್ಯಕ್ಷ, ಭಾರತೀಯ ರೈಲ್ವೆ ಬೋರ್ಡ್ ಸಲಹಾ ಸಮಿತಿಯ ಮಾಜಿ ಸದಸ್ಯ ವೆಂಕಟೇಶ್ (Mlore-MAO Train Timing Change) ಕಿಣಿಯವರು ಮನವಿ ಸಲ್ಲಿಸಿದರು.
ಮಡಗಾಂವ್ನಿಂದ (Madgaon) ಬೆಳಗ್ಗೆ 5 ಗಂಟೆಗೆ ಹೊರಟು 12.15 ಗಂಟೆಗೆ ಮಂಗಳೂರು ತಲುಪುತ್ತಿತ್ತು ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಮಂಗಳೂರು, ಉಡುಪಿಗೆ ಹೋಗುವವರಿಗೆ
ಅನಾನುಕೂಲತೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದರು. ಆ ಮನವಿಯನ್ನು ಕೊಂಕಣ ರೈಲ್ವೆ ಪಾಲಕಾರು ವಿಭಾಗದ ಪರಿಶೀಲನೆಗೆ ಕಳುಹಿಸಿದ್ದರು.
ಪಾಲಕಾರು ವಿಭಾಗ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಿಲ್ಲ. ನಂತರ ಉಡುಪಿಯ ಸಮಾಜ ಸೇವಕ ಹನುಮಂತ ಕಾಮತ್ (Hanumantha Kamath) ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಡ ಹೇರಿದ್ದರು.
ನಂತರ ನಡೆದ ಸಭೆಯಲ್ಲಿ ಪ್ರಸ್ತಾವನೆಗೆ ದಕ್ಷಿಣ ರೈಲ್ವೆ ಒಪ್ಪಿಗೆ ಸೂಚಿಸಿದ್ದರು ಅನುಮತಿ ಸಿಕ್ಕಿರಲಿಲ್ಲ. ನಂತರ ರೈಲ್ವೆ ಬೋರ್ಡ್ ಅಧಿಕಾರಿಗಳ ಜತೆ ನಡೆಸಿದ ನಿರಂತರ ಸಂಪರ್ಕದಿಂದ ಭಾರತೀಯ ರೈಲ್ವೆ ಬೋರ್ಡ್
(Railway Board) ಇದೀಗ ಸಮಯ ಬದಲಾವಣೆಗೊಳಿಸಿ ಆದೇಶ ಹೊರಡಿಸಿದೆ.
ಮಡಗಾಂವ್ ರೈಲು ಬೆಳಿಗ್ಗೆ 4 ಗಂಟೆಗೆ ಹೊರಡಲಿದೆ
ಬೆಳಗ್ಗೆ 4 ಗಂಟೆಗೆ ಮಡಗಾಂವ್ ಬಿಟ್ಟು ಬೆಳಗ್ಗೆ 7.30ಗಂಟೆಗೆ ಬೈಂದೂರು, 10.15 ಗಂಟೆಗೆ ಸುರತ್ಕಲ್ ತಲುಪಲಿದ್ದು, ಈ ಸಮಯ ಬದಲಾವಣೆಯಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಭಾರಿ ಅನುಕೂಲ ಆಗಿದೆ
ಎಂದು ಹನುಮಂತ ನಾಯಕ್ ತಿಳಿಸಿದ್ದಾರೆ. ಮನವಿಗೆ ಸ್ಪಂದಿಸಿ ರೈಲು ಸಮಯ ಬದಲಾವಣೆಗೊಳಿಸಿ ಸಹಕರಿಸಿದ ರೈಲ್ವೆ ಬೋರ್ಡ್ಗೆ, ಈ ಹೋರಾಟದಲ್ಲಿಸಹಕರಿಸಿದ ಕೈಜೋಡಿಸಿದ ಸಂಸದ ಬಿ.ವೈ.ರಾಘವೇಂದ್ರ,
ಉಡುಪಿಯ ಸಮಾಜಸೇವಕ ಹನುಮಂತ ನಾಯಕ್ ಅವರಿಗೂ ಕೃತಜ್ಞತೆಗಳು.
ಬೈಂದೂರು ಭಾರತೀಯ ರೈಲ್ವೆ ಬೋರ್ಡ್ ಸಲಹಾ ಸಮಿತಿ ಮಾಜಿ ಸದಸ್ಯ ವೆಂಕಟೇಶ್ ಕಿಣಿ (Venkatesh Kini) ಅವರು, ಮಡಗಾಂವ್-ಮಂಗಳೂರು ಎಕ್ಸ್ಪ್ರೆಸ್ ಬೆಳಗ್ಗೆ ಬೇಗನೆ ಕರಾವಳಿಗೆ
ಆಗಮಿಸುತ್ತಿರುವುದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ, ಕಚೇರಿ ಕೆಲಸಕ್ಕೆ ಹೋಗುವ ನಿತ್ಯ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಮಹಿಷ ದಸರಾ : 144 ಸೆಕ್ಷನ್ ಜಾರಿ, ಸಭಾ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ..!
- ಭವ್ಯಶ್ರೀ ಆರ್.ಜೆ