Mysore: ವಿವಾದಿತ ಮಹಿಷಾ ದಸರಾ (Mahisha Dasara) ಆಚರಣೆಯನ್ನು ಕೇವಲ ಸಭಾ ಕಾರ್ಯಕ್ರಮಕ್ಕೆ ಮಾತ್ರ (Section 144 for Mahisha Dasara) ಸೀಮಿತಗೊಳಿಸಿ, ಯಾವುದೇ
ರ್ಯಾಲಿ, ಪ್ರತಿಭಟನೆ, ಪರ-ವಿರೋಧ ಘೋಷಣೆ ಕೂಗದಂತೆ ಮೈಸೂರು ಪೊಲೀಸರು ಅಕ್ಟೋಬರ್ (October) 12ರ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಮೈಸೂರು ಪುರಭವನದಲ್ಲಿ ಆಯೋಜಿಸಿರುವ ಮಹಿಷ ದಸರಾದ ಸಭಾ ಕಾರ್ಯಕ್ರಮಕ್ಕೆ (Section 144 for Mahisha Dasara) ಷರತ್ತು ಬದ್ಧ ಅನುಮತಿ ನೀಡಲಾಗಿದೆ.
ಇನ್ನು ಮಹಿಷಾ ದಸರಾ ಸಮಿತಿಯು ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ ಬಳಿ ಆಯೋಜಿಸಲು ಉದ್ದೇಶಿಸಿದ್ದ ಕಾರ್ಯಕ್ರಮಕ್ಕೆ ಪೊಲೀಸ ಇಲಾಖೆ ಅನುಮತಿ ನಿರಾಕರಿಸಿದೆ.
ಆದರೆ ಮಹಿಷ ದಸರಾದ ಸಭಾ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇದೇ ವೇಳೆ ಚಲೋ ಚಾಮುಂಡಿ (Chalo Chamundi)
ಕಾರ್ಯಕ್ರಮಕ್ಕೂ ಅನುಮತಿ ನಿರಾಕರಿಸಲಾಗಿದೆ.
ಮಹಿಷಾ ದಸರಾ ಆಚರಣೆಗೆ ಪೊಲೀಸ್ ಇಲಾಖೆ ವಿಧಿಸಿರುವ ಷರತ್ತುಗಳು ಹೀಗಿವೆ :
• ಪೊಲೀಸ್ ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವುದು.
• ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ (Section) 144 ಜಾರಿ ಇರುವುದರಿಂದ ಮೆರವಣಿಗೆ, ಪ್ರತಿಭಟನೆ, ಬೈಕ್ ರಾಲಿಯನ್ನು ನಡೆಸಬಾರದು.
• ಯಾವುದೇ ಪರ ವಿರೋಧ ಘೋಷಣೆ ಕೂಗಬಾರದು.
• ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಬಾರದು.
• ಐದು ಜನರಿಗಿಂತ ಹೆಚ್ಚಿನ ಜನ ಗುಂಪು ಸೇರಬಾರದು.• ಬಹಿರಂಗ ಸಭೆ ಸಮಾರಂಭಗಳನ್ನು ನಡೆಸಬಾರದು.
• ಪ್ರಚೋದನಕಾರಿಯಾಗಿ ಭಾಷಣ ಮಾಡಬಾರದು
• ಸಾರ್ವಜನಿಕ ಪ್ರಚಾರ, ಧ್ವನಿವರ್ಧಕ ಬಳಸಬಾರದು.
• ಮೂರ್ತಿ ಮೆರವಣಿಗೆ ಮಾಡಬಾರದು.
• ಮೈಸೂರಿನ ಚಾಮುಂಡಿ ಬೆಟ್ಟ ಮತ್ತು ಮೈಸೂರಿನ ಟೌನ್ ಹಾಲ್ನ (Town Hall) ಹೊರತುಪಡಿಸಿ ಮೈಸೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಆದರೆ ಪ್ರವಾಸಿಗರಿಗೆ
ಈ ನಿಷೇಧಾಜ್ಞೆಯಲ್ಲಿ ವಿನಾಯಿತಿ ಇರುತ್ತದೆ.
ಇದನ್ನು ಓದಿ: ಪ್ರಕೃತಿ ವಿಕೋಪದಂತಹ ಸಮಯದಲ್ಲಿ ನಿಮ್ಮ ಮೊಬೈಲ್ಗೆ ಬರುತ್ತೆ ಎಚ್ಚರಿಕೆ ಸಂದೇಶ: ಪ್ರಯೋಗಾರ್ಥ ಪರೀಕ್ಷೆ