ಯಡಿಯೂರಪ್ಪಗೆ ಕೇಂದ್ರದ ನಾಯಕರ ಬಹುಪರಾಕ್: ಮಾಜಿ ಸಿಎಂ ಹಾಡಿಹೊಗಳಿದ ನರೇಂದ್ರ ಮೋದಿ & ಅಮಿತ್ ಶಾ

ಬೆಂಗಳೂರು, ಜು. 28: ಮುಖ್ಯಮಂತ್ರಿ ಸ್ಥಾನ ಪದತ್ಯಾಗ ಮಾಡಿದ ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಡಿ ಹೊಗಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ಪಕ್ಷ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ನೀಡಿರುವ ಅದ್ಭುತ ಕೊಡುಗೆ ಸ್ಮರಿಸಲು ಪದಗಳೇ ಬರುತ್ತಿಲ್ಲ.ಹಲವು ದಶಕಗಳ ಕಾಲ ಕಷ್ಟಪಟ್ಟು ಹಾಗೂ ಕರ್ನಾಟಕ ಮೂಲೆ ಮೂಲೆಗಳಿಗೆ ಪ್ರಯಾಣ ಮಾಡಿದರು. ಸಮಾಜ ಕಲ್ಯಾಣಕ್ಕಾಗಿ ಯಡಿಯೂರಪ್ಪ ಬದ್ಧರಾಗಿರುವುದರಿಂದಲೇ ಅವರು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಅಮಿತ್ ಶಾ ಟ್ವೀಟ್ ಮಾಡಿ, ಯಡಿಯೂರಪ್ಪ ಪದತ್ಯಾಗವನ್ನು ಅಮಿತ್ ಶಾ ಶ್ಲಾಘಿಸಿದ್ದಾರೆ. ಅತ್ಯಂತ ಭಕ್ತಿಯಿಂದ ಕರ್ನಾಟಕ ಜನ ಹಾಗೂ ಪಕ್ಷದ ಸೇವೆ ಮಾಡಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಲು ಕಠಿಣ ಕೆಲಸ ಹಾಗೂ ಕೊಡುಗೆಯಂತೂ ನಿಜಕ್ಕೂ ಸ್ಫೂರ್ತಿದಾಯಕ.ಅವರು ಪಕ್ಷ ಹಾಗೂ ಸರ್ಕಾರಕ್ಕೆ ಮಾರ್ಗದರ್ಶನ ಮುಂದುವರಿಸುವ ವಿಶ್ವಾಸವಿದೆ ಎಂದಿದ್ದಾರೆ.

ಇದೇ ವೇಳೆ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಸಿಎಂ ಅವರು ತಮ್ಮ ಅನುಭವ ಹಾಗೂ ಬುದ್ಧಿವಂತಿಕೆಯಿಂದ ರಾಜ್ಯದ ಬಡವರು ಮತ್ತು ರೈತರ ಸೇವೆ ಮಾಡುವ ಮೂಲಕ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲಿದ್ದಾರೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Exit mobile version