ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೀತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಪ್ರಕರಣ

ಬೆಂಗಳೂರು, ಜು. 17: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಪ್ರಕರಣ ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೀತಿದೆ.

ದೊಡ್ಡಮಟ್ಟದ ಸಂಚಲನ‌ ಮೂಡಿಸಿರೋ ಹೈಪ್ರೊಫೈಲ್ ಕೇಸ್ ನಲ್ಲಿ ಕಡೆಗೂ ಎಂಟ್ರಿ ಕೊಟ್ಟಿರೋ ಮೈಸೂರು ಪೊಲೀಸರು, ನಿರ್ಮಾಪಕ ಸಂದೇಶ್ ಮಾಲಿಕತ್ವದ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಪ್ರಕರಣದ ಸತ್ಯಸತ್ಯತೆ ಪರಿಶೀಲನೆಗೆ ನಡೆಸಿದ್ರು.

ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರೋ ಬೆನ್ನಲ್ಲೇ ಮತ್ತೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ದರ್ಶನ್ ಅವರು ಕ್ಷಮೆ ಕೇಳುವಂತೆ ಆಗ್ರಹಿಸಿದರು. ಆದ್ರೆ, ದರ್ಶನ್ ಮಾತ್ರ ಸಖತ್ ರಿಲ್ಯಾಕ್ಸ್ ಮೂಡ್ ನಲ್ಲಿದ್ರು. ಫ್ರೆಂಡ್ ಅಶೋಕ್ ಮನೆಗೆ ಭೇಟಿ ಕೊಟ್ಟ ಅವರು ಆಷಾಢ ಶುಕ್ರವಾರ ಹಿನ್ನೆಲೆ ಪೂಜೆಯಲ್ಲಿ ಪಾಲ್ಗೊಂಡರು.

ದರ್ಶನ್ ಭೇಟಿ ಕೊಟ್ಟಿರೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ಕಾರಣಕ್ಕಾಗಿ ಅಶೋಕ್ ಮನೆ ಮುಂದೆ ನೂರಾರು ಜನರು ಜಮಾಯಿಸಿದ್ರು. ಸೆಲ್ಫಿ ಗಾಗಿ ಕಾಯುತ್ತಿದ್ರು. ಆದ್ರೆ ಮಧ್ಯಾಹ್ನ ಊಟ ಮಾಡಿ ಹೊರಬಂದ ನಟ ದರ್ಶನ್ ಮಾಧ್ಯಮಗಳಿಗೆ ಹೇಳಿಕೆ ಕೊಡದೆ ಹೊರ ನಡೆದ್ರು ಅಭಿಮಾನಿಗಳಿಗೆ ಕೈ ಬೀಸಿ ಕಾರಿನ ಒಳಗೆ ಕೂತರು.

ಇನ್ನು ರಾತ್ರಿ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಲಿರೋ ದರ್ಶನ್, ನಾಳೆ(ಶನಿವಾರ) ಪತ್ರಿಕಾ ಗೋಷ್ಠಿ ನಡೆಸುತ್ತಾರಾ? ಇಲ್ಲವೋ ಅನ್ನೋದೇ ಸದ್ಯದ ಕುತೂಹಲ.

Exit mobile version