ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಪಾಕ್‌ ಧ್ವಜಗಳ ಹಾರಾಟ ಪ್ರಾರಂಭವಾಗಿದೆ: ಬಸನಗೌಡ ಪಾಟೀಲ್‌ ಯತ್ನಾಳ್

ವಿಧಾನಸಭೆ : ಬಿಜೆಪಿ(BJP) ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ(Basana gaowda patil yathnal) ರಾಜ್ಯದಲ್ಲಿ ಕಾಂಗ್ರೆಸ್‌(Congress) ಸರ್ಕಾರ ಬಂದ ಬಳಿಕ ಪಾಕ್‌ ಧ್ವಜಗಳ ಹಾರಾಟ ಪ್ರಾರಂಭವಾಗಿದೆ ಎಂದು ಆರೋಪಿಸಿದ್ದಾರೆ.

ಬೆಳಗಾವಿಯ(Belgaum) ಜೈನಮುನಿ ಹತ್ಯೆ ಕುರಿತು ಮಾತನಾಡುತ್ತಿದ್ದ ವೇಳೆ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ಜನತೆ ಭೀತಿಯಲ್ಲಿ ಬದುಕುವಂತಾಗಿದೆ. ಟಿ.ನರಸೀಪುರದಲ್ಲಿ(T.Naraseepura) ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ. ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪಾಕ್‌ ಧ್ವಜಗಳ ಹಾರಾಟ ಈ ಸರ್ಕಾರದಲ್ಲಿ ಶುರುವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸದಸ್ಯರು ಮತ್ತು ಸಭಾಧ್ಯಕ್ಷ ಯು.ಟಿ.ಖಾದರ್‌(U.T Khadar) ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ಈಗ ನಾವು ಜೈನಮುನಿಗಳ ಹತ್ಯೆ ಕುರಿತು ಮಾತನಾಡುತ್ತಿದ್ದೇವೆ ಅದರ ನಡುವೆ ಬೇರೆ ವಿಷಯದ ಬಗ್ಗೆ ಚರ್ಚೆ ಬೇಡ. ನಿಮ್ಮ ಅಭಿಪ್ರಾಯವನ್ನು ನೀವು ಇಲ್ಲಿ ವ್ಯಕ್ತಪಡಿಸಿ. ಈ ವಿಷಯಗಳನ್ನು ಬೇರೆ ಅವಧಿಯಲ್ಲಿ ಬೇಕಾದರೆ ಪ್ರಸ್ತಾಪಿಸಿ ಎಂದರು.

ಇದನ್ನೂ ಓದಿ : ಸದ್ಯದಲ್ಲೇ ರದ್ದಾಗಲಿರುವ 2000 ರೂ ನೋಟುಗಳನ್ನು ಮನೆಗೇ ಬಂದು ಸ್ವೀಕರಿಸಲಿದೆ ಅಮೆಜಾನ್‌

ಜೈನಮುನಿಗಳ ಕೊಲೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ತಮ್ಮ ಆಗ್ರಹವೇನು ಎಂಬುದನ್ನು ಸದ್ಯಕ್ಕೆ ತಿಳಿಸಬೇಕು ಬೇರೆ ವಿಷಯಗಳಿಗಾಗಿ ಕಾಲಾವಕಾಶ ಕೋರಿದರೆ ನೀಡಲಾಗುವುದು. ಎಂದು ಸಭಾಧ್ಯಕ್ಷರು ತಿಳಿಸಿದರು.

ಅನಗತ್ಯವಾಗಿ ಯತ್ನಾಳ ಅವರು ವಿಷಯಾಂತರ ಮಾಡುತ್ತಿದ್ದಾರೆ. ಯಾವ ವಿಷಯದ ಮೇಲೆ ಚರ್ಚೆ ನಡೆಯುತ್ತಿದೆಯೋ ಅದಕ್ಕೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು ಎಂದು ಕಾಂಗ್ರೆಸ್‌ ಸದಸ್ಯರು ಸಹವಾದಿಸಿದರು.

ಇದನ್ನೂ ಓದಿ : ಪಿಡಿಒ ಹುದ್ದೆಗೆ ಅರ್ಜಿ ಅಹ್ವಾನ : ವೇತನ, ಅರ್ಹತೆ, ಅರ್ಜಿ ವಿಧಾನ, ಆಯ್ಕೆ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ

ಆಗ ಯತ್ನಾಳ, ಜೈನಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ(CBI) ನೀಡಬೇಕು. ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ಒಂದು ಕೋಮಿನ ರಕ್ಷಣೆ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ರಶ್ಮಿತಾ ಅನೀಶ್

Exit mobile version