ಧ್ವನಿವರ್ಧಕ ಆದೇಶ ಪಾಲಿಸಬೇಕು, ಇಲ್ಲದಿದ್ದರೇ ಅವರ ಮೇಲೆ ಗುಂಡು ಹಾರಿಸುತ್ತೇನೆ : ಪ್ರಮೋದ್ ಮುತಾಲಿಕ್!

Pramod

ಧ್ವನಿವರ್ಧಕ(Loudspeaker) ಬಳಕೆ ಮಾಡುವುದರಲ್ಲಿ ಸುಪ್ರೀಂಕೋರ್ಟ್(SupremeCourt) ನೀಡಿರುವ ಆದೇಶವನ್ನು ಪಾಲಿಸದವರಿಗೆ ನಾನೇ ಗುಂಡಿಟ್ಟು ಹೊಡೀತೇನೆ ಎಂದು ಪ್ರಚೋದನಕಾರಿ(Provoking Statement) ಹೇಳಿಕೆ ನೀಡುವ ಮುಖೇನ ವಿವಾದವನ್ನು ಹುಟ್ಟುಹಾಕಿದ್ದಾರೆ.

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Muthalik) ಹುಬ್ಬಳ್ಳಿಯಲ್ಲಿ(Hubbali) ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಆಜಾನ್ ಬಳಕೆ ಈಗ ಮತ್ತೊಮ್ಮೆ ಬುಗಿಲೆದ್ದ ವಿಚಾರವಾಗಿದ್ದು, ಇದಕ್ಕೆ ತೀವ್ರತೆ ಹೆಚ್ಚಿಸಿರೋದು ರಾಜಕೀಯ ವಲಯಗಳು ಎಂಬುದು ಪ್ರಮುಖವಾಗಿ ತಿಳಿದುಬಂದಿದೆ. ಧ್ವನಿವರ್ಧಕಗಳ ಬಳಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸದೆ ಇರುವವರ ವಿರುದ್ಧ ಯಾಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ!

ನಿಮ್ಮ ಕೈಲಿ ಸರ್ಕಾರ ನಡೆಸಲು ಆಗದಿದ್ದರೇ ಮೊದಲು ನನಗೆ ಕೊಡಿ, ನಿಮಗೆ ತೋರಿಸುತ್ತೀನಿ ಸರ್ಕಾರ ನಡೆಸುವುದು ಹೇಗೆ ಅಂಥ! ನೀವು ಯಾಕೆ ಈ ಕುರಿತು ಧ್ವನಿ ಎತ್ತುತ್ತಿಲ್ಲ? ಯಾಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸದೆ ಇರುವವರ ವಿರುದ್ಧ ಕ್ರಮಕೈಗೊಳ್ಳದೆ ಕೈಕಟ್ಟಿ ಕುಳಿತ್ತಿದ್ದಾರೆ? ನಿಮ್ಮಿಂದ ಸರ್ಕಾರ ನಡೆಸಲು ಅಸಾಧ್ಯವಾದರೆ ಕೊಡಿ ನನಗೆ, ಪಾಲಿಸದವರಿಗೆ ಗುಂಡಿಟ್ಟು ಹೊಡಿತೀನಿ. ಸರ್ಕಾರ ನಮ್ಮ ಸುಪ್ರಭಾತಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿತ್ತು,

ಆದ್ರೆ ಇದಕ್ಕೆ ಮಾತ್ರ ಯಾವುದೇ ಅಡ್ಡಿಯಿಲ್ಲ? ಕ್ರಮ ಇಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದಲ್ಲದೇ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

Exit mobile version