ಶನಿವಾರ ಮತ ಎಣಿಕೆ: ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿ

Bengaluru : 2023 ರಾಜ್ಯ ವಿಧಾನ ಸಭಾ ಚುನಾವಣೆಯು (2023 State Assembly Elections) ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯು (Prohibition in Bengaluru city) ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡು ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ವಿಧಾನಸಭೆಯ ಮತ ಎಣಿಕೆಯು ಮೇ 13ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ.

ಕೆಲವು ಅಭ್ಯರ್ಥಿಗಳು ಫಲಿತಾಂಶಕ್ಕೂ ಮುನ್ನ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರೆ, ಕೆಲವರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ ಇನ್ನು ಕೆಲವು ಪಕ್ಷಗಳ ನಾಯಕರು ಸರ್ಕಾರ ರಚನೆಯ ಬಗ್ಗೆ ತಲೆಕಡೆಸಿಕೊಂಡಿದ್ದಾರೆ.

ರಾಜ್ಯದ ಪ್ರಮುಖ ನಾಯಕರು ಮುಖ್ಯಮಂತ್ರಿ ಹುದ್ದೆಗೇರಲು ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/best-selling-cars/

ನಾಳೆ ನಡೆಯಲಿರುವ ಮತ ಎಣಿಕೆಗೆ ಸೋತ ಅಭ್ಯರ್ಥಿಗಳ ಪರವಾಗಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸುವ ಸಾಧ್ಯತೆಗಳು

ಇರುವುದರಿಂದ ಕಲಂ 144 ಅಡಿಯಲ್ಲಿ ಬೆಂಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಮುಖ್ಯಸ್ಥ ಪ್ರತಾಪ್ ರೆಡ್ಡಿ (Bengaluru City Police Chief Pratap Reddy), ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಕುರಿತು ಗುರುವಾರ ಆದೇಶ ಹೊರಡಿಸಿದ ಅವರು, ‘ಗುಪ್ತಚರ ಮಾಹಿತಿ ಆಧರಿಸಿ, ಮತ ಎಣಿಕೆ ದಿನದಂದು ಬೆಂಗಳೂರಿನಾದ್ಯಂತ ಐವರು

ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಕೂಟಗಳನ್ನು ನಡೆಸದಂತೆ ರಾಜ್ಯವು ಕ್ರಮ ಕೈಗೊಂಡಿದೆ’ ಎಂದರು. ಅಲ್ಲದೆ, ಯಾವುದೇ ಮಾರಾಕಾಸ್ತ್ರಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ನಾಳೆ ಏನಿರುತ್ತೆ?

ಬೆಂಗಳೂರಿನಲ್ಲಿ ನಾಳೆ ವೈದ್ಯಕೀಯ ಸೇವೆ, ಹಾಲು, ಔಷಧಿ, ಹೋಟೆಲ್, ಅಗತ್ಯ ವಸ್ತುಗಳು, ಮದುವೆ, ಶವಸಂಸ್ಕಾರ ಬಿಟ್ಟು ಉಳಿದೆಲ್ಲದಕ್ಕೂ ನಾಳೆ ಪ್ರತಿಬಂಧಕಾಜ್ಞೆ ಅನ್ವಯವಾಗಲಿದೆ.

ಏನಿರಲ್ಲ?

ಪಟಾಕಿ ಸಿಡಿಸುವುದು, ಭಾವಚಿತ್ರಗಳ ಪ್ರದರ್ಶನ, ಸಾರ್ವಜನಿಕ ಫಲಕಗಳನ್ನು ಸುಡುವುದು, ಸಂಗೀತ ನುಡಿಸುವುದು, ಸನ್ನೆ ಮಾಡುವುದು,

ಪೋಸ್ಟರ್‌ಗಳನ್ನು ಪ್ರದರ್ಶಿಸುವುದು ಮುಂತಾದ ಸ್ಫೋಟಕ ವಸ್ತುಗಳ ಸಾಗಣೆ ನಿಷೇಧವು ಮೇ 13 ರಂದು ಬೆಳಿಗ್ಗೆ 6:00 ರಿಂದ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ (Prohibition in Bengaluru city) ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಮತ ಎಣಿಕೆಗೆ ನಡೆಯುತ್ತಿದೆ ಸಕಲ ಸಿದ್ಧತೆಗಳು : ಬೆಂಗಳೂರಿನಲ್ಲಿ ಸ್ಟ್ರಾಂಗ್ ರೂಂ ಬಿಗಿ ಬಂದೋಬಸ್ತ್ ಹೇಗಿದೆ?

ಮೇ 13 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಚುನಾವಣಾ ಆಯೋಗ (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ.

ಅದರಂತೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಅಡಿಯಲ್ಲಿ ಬರುವ ಮತದಾನದ ವಿವಿಪ್ಯಾಟ್ ಗಳಿಗೆ ನಾಲ್ಕು ಭದ್ರತಾ ಕೊಠಡಿಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕರ್ನಾಟಕ ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯ ಈಗ ವಿವಿಧ ಸ್ಟ್ರಾಂಗ್ ರೂಮ್​ಗಳಲ್ಲಿ ಭದ್ರವಾಗಿದೆ. ಮೇ 13ರಂದು ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂಬುದನ್ನು ಈಗ ಕಾದು ನೋಡಬೇಕಿದೆ

Exit mobile version