ರೇಖಾ ಕದಿರೇಶ್‌ ಕೊಲೆ ಪ್ರಕರಣ: ಪರರಿಯಾಗುತ್ತಿದ್ದ ಆರೋಪಿಗಳನ್ನು ಗುಂಡು ಹೊಡೆದು ಬಂಧಿಸಿದ ಪೊಲೀಸರು

ಬೆಂಗಳೂರು,ಜೂ.25:ನಿನ್ನೆಯಷ್ಟೆ ಮಾಜಿ ಕಾಪೊ೯ರೇಟ್ ರೇಖಾ ಕದಿರೇಶ್ ಅವರನ್ನು ಹಡಹಗಲೆ ನಡುರಸ್ತೆಯಲ್ಲಿ ಬಬ೯ರವಾಗಿ ಹತ್ಯೆ ಮಾಡಿ ತಲೆಮರಿಸಿಕೊಂಡ ಆರೋಪಿಗಳನ್ನು ಗುಂಡು ಹೊಡೆದು ಬಂದಿಸಲಾಗಿದೆ.

ಆರೋಪಿಗಳದ ಪೀಟರ್ ಹಾಗೂ ಸೂಯ೯ ಕಮಾಕ್ಷಿಪಾಳ್ಯ ಬಳಿಯ ಬಜಾರ್ ಗ್ರೌಂಡ್ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪಶ್ಚಿಮ ವಿಭಾಗದ ಪೊಲೀಸರು ಇಬ್ಬರನ್ನು ಹಿಡಿಯಲು ಹೋಗಿದ್ದರು. ಈ ವೇಳೆ ಪಿಎಸ್ಐ ಹಾಗೂ ಕಾನ್ಸ್‌ಟೇಬಲ್ಗೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದರು. ಈ ವೇಳೆ ಉಪ್ಪಾರಪೇಟೆ  ಠಾಣೆ ಇನ್ಸ್ ಪೆಕ್ಟರ್ ಶಿವಸ್ವಾಮಿ ಹಾಗೂ ಕಾಟನ್ ಪೇಟೆ ಠಾಣೆ ಇನ್ಸ್ ಪೆಕ್ಟರ್ ಚಿದಾನಂದ ಮರ‍್ತಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟಿದ್ದಾರೆ, ಆದರು ಆರೋಪಿಗಳು ಪರಾರಿಯಾಗುತ್ತಿದ್ದರು.ಈ ವೇಳೆ ಇನ್ಸ್ ಪೆಕ್ಟರ್‌ಗಳಾದ ಶಿವಸ್ವಾಮಿ ಹಾಗೂ  ಚಿದಾನಂದಮರ‍್ತಿ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.‌

ಸದ್ಯ ಇಬ್ಬರು ಆರೋಪಿಗಳಾದ ಪೀಟರ್ ಹಾಗೂ ಸೂಯ೯ಗೆ ಸುಂಕದಕಟ್ಟೆಯ ಲಕ್ಷ್ಮೀ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Exit mobile version