ಮುಂಬೈನಲ್ಲಿ ರಾಜೀನಾಮೆ ವಿಚಾರ ನಿರ್ಧಾರ: ರಮೇಶ್ ಜಾರಕಿಹೋಳಿ

ಮೈಸೂರು,ಜೂ.25: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸೂಚ್ಯವಾಗಿ ನುಡಿದರು.

ಮೈಸೂರು ಸುತ್ತೂರು ಶ್ರೀಮಠಕ್ಕೆ ಭೇಟಿ ನೀಡುವ ಸಲುವಾಗಿ ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ತಂದವನು ನಾನು, ಮಂತ್ರಿ ಸ್ಥಾನ ಕೇಳ್ತಿನಿ. ಅದರ ನಂತರ ಮುಂಬೈನಲ್ಲಿ ಹೋಗಿ ಮಾತಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದ ಅವರು, ಸ್ವಾಮೀಜಿ ಅವರ ತಾಯಿ ಮೃತಪಟ್ಟ ಕಾರಣ ಸ್ವಾಮೀಜಿಯವರನ್ನು ಭೇಟಿ ಮಾಡಲಿಕ್ಕೆ ಬಂದಿದ್ದೇನೆ. ಮಂತ್ರಿಗೋಸ್ಕರ ನಾನು ಸ್ವಾಮೀಜಿಯನ್ನು ಭೇಟಿ ಮಾಡುತ್ತಿಲ್ಲ ಎಂದರು.

ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು, ಕೆಲ ಸಮಯ ಶ್ರೀಗಳ ಜೋತೆ ಮಾತನಾಡಿದರು. ಜಾರಕಿಹೊಳಿ ಅವರೊಂದಿಗೆ ಸಹೋದರ ಲಖನ್, ಅಳಿಯ ಅಂಬಿರಾಯ ಪಾಟೀಲ್, ಜಂಗಲ್ ಲಾಡ್ಜಸ್ ಅಧ್ಯಕ್ಷ ಅಪ್ಪಣ್ಣ ಮತ್ತಿತರರು ಇದ್ದರು.

Exit mobile version