ಸಚಿವ ಸಂಪುಟ ವಿಸ್ತರಣೆ: ಸಂವಿಧಾನದ ಆಶಯಕ್ಕೆ ಕೊಡಲಿ ಪೆಟ್ಟು: ಎಚ್.ಸಿ.ಎಂ

ಬೆಂಗಳೂರು, ಜ. 16: ಸಚಿವ ಸಂಪುಟ ವಿಸ್ತರಣೆ ಸಂವಿಧಾನದ ಆಶಯಗಳಿಗೆ ಅಕ್ಷರಶಃ ಕೊಡಲಿ ಪೆಟ್ಟು ನೀಡಿದಂತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಿಡಿಕಾರಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟವು ಸಾಮಾಜಿಕ ನ್ಯಾಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದ್ದು ಸಂವಿಧಾನದ ಆಶಯಗಳಿಗೆ ಅಕ್ಷರಶಃ ಕೊಡಲಿ ಪೆಟ್ಟು ನೀಡಿದಂತಿದ್ದು ಇಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಹಿತವನ್ನು ಕಾಯುವಂತಹ ಯಾವುದೇ ತೆರನಾದ ನ್ಯಾಯಬದ್ಧವಾದ ಲಕ್ಷಣವಿಲ್ಲ.

ಸದಾ ಮನುವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಈ ರಾಜಕೀಯ ನಾಯಕರಿಗೆ ಬಸವಣ್ಣನವರ ಅನುಭವ ಮಂಟಪದ ಆಶಯಗಳ ಬಗ್ಗೆ ನಿಜಕ್ಕೂ ತಿಳಿದಿಲ್ಲ. ಹಾಗೆ ತಿಳಿದಿದ್ದರೆ ಇವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಸಚಿವ ಸಂಪುಟವನ್ನು ರಚಿಸುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.

Exit mobile version