ಮದುವೆ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ರಾಶಿ ರಾಶಿ ದುಡ್ಡು: ಸಕ್ಕರೆ ಸಚಿವರ ವರ್ತನೆಗೆ ಭಾರಿ ಟೀಕೆ.

Hyderabad: ಹೈದರಾಬಾದ್‌ನ ರೆಸಾರ್ಟ್ ಒಂದರಲ್ಲಿ ನಡೆದ ಬೀದರ್ ಕಾಂಗ್ರೆಸ್ (Shivanand Patil Viral Video) ಮುಖಂಡರೊಬ್ಬನ ಮಗನ ಮದುವೆ ಕಾರ್ಯಕ್ರಮದಲ್ಲಿ ಶಿವಾನಂದ್

ಪಾಟೀಲ್ ಅಷ್ಟೇ ಅಲ್ಲದೆ ಜಮೀರ್ ಅಹ್ಮದ್ ಖಾನ್ (Jamir Ahammed Khan) ಕೂಡ ಉಪಸ್ಥಿತರಿದ್ದರು. ಮದುವೆ ಕಾರ್ಯಕ್ರಮದಲ್ಲಿ ಹಾಡಿನ ಕಾರ್ಯಕ್ರಮ ನಡೆಯುವ ವೇಳೆ ದುಡ್ಡಿನ ಸುರಿಮಳೆಯ

ಕಾರ್ಯಕ್ರಮವು ಕೂಡ ನಡೆಯಿತು, ಹಾಗಾಗಿ ಶಿವಾನಂದ್ ಪಾಟೀಲ್ ಕಾಲಿನ ಕೆಳಗೆ ನೋಟುಗಳಿರುವ ಫೋಟೋ ಈಗ ವಿಡಿಯೋ ಎಲ್ಲೆಡೆ (Shivanand Patil Viral Video) ವೈರಲ್ ಆಗುತ್ತಿದ್ದು,

ಸಚಿವರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.

ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಹೇಗೆ ಮಜಾ ಮಾಡುತ್ತಿದ್ದಾರೆ ಎಂದು ಶಿವಾನಂದ್ ಪಾಟೀಲ್ (Shivanand Patil) ನೈಜತೆಯನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ.

ಕಲೆಕ್ಷನ್ ದಂಧೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು ಮಿಂದೇಳುತ್ತಿದ್ದಾರೆ ಎಂದು ಬಿಜೆಪಿ (BJP) ಈ ವಿಚಾರವಾಗಿ ಟ್ವೀಟ್ ಮಾಡಿದ್ದು, ಈ ಕುರಿತು ಸಚಿವರು ಉಡಾಫೆ ಉತ್ತರವನ್ನು ಕೊಟ್ಟಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ನಾನು ಯಾಕೆ ಲಗ್ನಕ್ಕೆ ಹೋಗಬಾರದು? ಅಲ್ಲಿಯವರ ಸಂಸ್ಕೃತಿಯೇ ಅದು? ಅದಕ್ಕೆ ನಾನೇನು ಮಾಡಕ್ಕಾಗುತ್ತೆ? ಹೈದರಾಬಾದ್ನಲ್ಲಿ

ಏನು ಬರ? ಅಲ್ಲಿಯ ಗೃಹ ಸಚಿವರು ಕಾರ್ಯಕ್ರಮಕ್ಕೆ ಬಂದಿದ್ದರು. ಇದನ್ನು ನೀವು ಈಗಲೂ ವೈರಲ್ (Viral) ಮಾಡುತ್ತೀರಾ? ಯಾರೋ ಮಾಡಿದ್ದಕ್ಕೆ ನಾನು ಮದುವೆಗೆ ಹೋಗಬಾರದ? ನಾನು ಮದುವೆ

ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೇ, ಆದರೆ ನಾನು ಅವರ ಸಂಸ್ಕೃತಿ ನಿಲ್ಲಿಸುವುದಕ್ಕಾಗುತ್ತಾ? ಎಂದು ಕೇಳಿದ್ದಾರೆ.

ಇದನ್ನು ಓದಿ: ಪಟಾಕಿ ಬ್ಯಾನ್: ಕರ್ನಾಟಕದಾದ್ಯಂತ ಪಟಾಕಿ ಬ್ಯಾನ್ ಮಾಡಲು ಚಿಂತನೆ, ಗೃಹ ಸಚಿವ ಜಿ ಪರಮೇಶ್ವರ್

Exit mobile version