Bengaluru: ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರು ನಗರದೊಳಗೆ ಅವರು ಸಂಚರಿಸುವಾಗ ಝೀರೋ ಟ್ರಾಫಿಕ್ (Zero Traffic) ವ್ಯವಸ್ಥೆ ಜಾರಿ ಮಾಡದಂತೆ ನಗರ ಪೊಲೀಸ್ (Siddaramaiah new decision) ಆಯುಕ್ತರಿಗೆ ಸೂಚಿಸಿದ್ದಾರೆ.
![zero traffic Siddaramaiah new decision](https://sp-ao.shortpixel.ai/client/to_webp,q_glossy,ret_img,w_645,h_363/https://vijayatimes.com/wp-content/uploads/2023/05/Untitled-design-2023-05-22T174359.153-1024x576.webp)
ಈ ನಿರ್ಧಾರವನ್ನು ಸ್ವತಃ ಮುಖ್ಯಮಂತ್ರಿಗಳೇ ಟ್ವಿಟರ್ (Twitter) ಮೂಲಕ ಸಾರ್ವಜನಿಕವಾಗಿ ಪ್ರಕಟಿಸಿದ್ದು,
ಬೆಂಗಳೂರು ನಗರ ಪೊಲೀಸ್ (Police) ಆಯುಕ್ತರಿಗೆ ತಮ್ಮ ವಾಹನಕ್ಕೆ ನೀಡಲಾಗಿದ್ದ ಝೀರೋ ಟ್ರಾಫಿಕ್ ಸೌಲಭ್ಯವನ್ನು ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ.
ರಸ್ತೆಯಲ್ಲಿನ ಸಂಚಾರ ದಟ್ಟಣೆ ಹಾಗೂ ಝೀರೋ ಟ್ರಾಫಿಕ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು (Siddaramaiah new decision) ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಈ ವ್ಯವಸ್ಥೆಯಿಂದಾಗಿ ವಾಹನ ಸವಾರರು ಸಿಗ್ನಲ್ಗಳಲ್ಲಿ (Signal) ಹಲವಾರು ನಿಮಿಷಗಳ ಕಾಲ ಕಾಯುವಂತೆ ಮಾಡುತ್ತದೆ,
ಇದರಿಂದಾಗಿ ಸಂಚಾರ ದಟ್ಟಣೆ ಮತ್ತು ಸಾರ್ವಜನಿಕ ಅನಾನುಕೂಲತೆ ಉಂಟಾಗುತ್ತದೆ. ಝೀರೋ ಟ್ರಾಫಿಕ್ (Zero Traffic) ವ್ಯವಸ್ಥೆಯಿಂದಾಗುವ ಋಣಾತ್ಮಕ ಪರಿಣಾಮವನ್ನು ಮನಗಂಡ ಸಿದ್ದರಾಮಯ್ಯ ಅದನ್ನು ಸಂಪೂರ್ಣವಾಗಿ ಹಿಂಪಡೆಯಲು ನಿರ್ಧರಿಸಿದ್ದಾರೆ.
![tweet siddaramaiah](https://sp-ao.shortpixel.ai/client/to_webp,q_glossy,ret_img,w_580,h_190/https://vijayatimes.com/wp-content/uploads/2023/05/Screenshot-2100.webp)
ಸಿಎಂ ಆಗಿ ಅಧಿಕಾರಿ ಸ್ವೀಕರಿಸಿದ ಒಂದೇ ದಿನದಲ್ಲಿ ಸಿದ್ದರಾಮಯ್ಯ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಇದನ್ನು ಎಲ್ಲರೂ ಇಷ್ಟಪಟ್ಟು ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೊಮ್ಮಾಯಿ (Bommai) ಮಾದರಿಯನ್ನುಇದೀಗ ಸಿದ್ದರಾಮಯ್ಯನವರೂ (Siddaramaiah) ಸಹ ಅನುಸರಿಸಿದ್ದಾರೆ.
ಬೆಂಗಳೂರಿನಲ್ಲಿ ತಮಗೆ ಝಿರೋ ಟ್ರಾಫಿಕ್ ಬೇಡ ಎಂದು ಈ ಹಿಂದೆ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೇಳಿದ್ದರು.
ರಶ್ಮಿತಾ ಅನೀಶ್