ರಾಹುಲ್ ಗಾಂಧಿಯ 2,000 ಕೋಟಿ ಆಸ್ತಿಯನ್ನು ಉಳಿಸಲು ಈ ಪ್ರತಿಭಟನೆ : ಸ್ಮೃತಿ ಇರಾನಿ!

ನವದೆಹಲಿ : ಕಾಂಗ್ರೆಸ್(Congress) ಪ್ರತಿಭಟನೆ ನಡೆಸುತ್ತಿರುವುದು ಪ್ರಜಾಪ್ರಭುತ್ವವನ್ನು ಉಳಿಸಲು ಅಲ್ಲ ಬದಲಾಗಿ ರಾಹುಲ್ ಗಾಂಧಿ(Rahul Gandhi) ಅವರ 2,000 ಕೋಟಿ ರೂ. ಮೌಲ್ಯದ ಆಸ್ತಿ ಉಳಿಸಲು ಎಂದು ಕೇಂದ್ರ ಸಚಿವೆ(Central Minister) ಸ್ಮೃತಿ ಇರಾನಿ(Smrithi Irani) ಅವರು ಇಂದು ಜಾರಿ ನಿರ್ದೇಶನಾಲಯದ(ED) ಕಚೇರಿಗೆ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಬೃಹತ್ ಪ್ರತಿಭಟನೆಗಳ ಹಮ್ಮಿಕೊಂಡಿದ್ದವರ ಕುರಿತು ಹೇಳಿದ್ದಾರೆ.

ಮನಿ ಲಾಂಡರಿಂಗ್(Money Laundering) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇ.ಡಿ ರಾಹುಲ್ ಗಾಂಧಿಯನ್ನು ವಿಚಾರಣೆಗೆ ಕರೆದಿತ್ತು. ಈ ವೇಳೆ ವಿಚಾರಣೆಗೆ ಹಾಜರಾದ ಬೆನ್ನಲ್ಲೇ, ದೇಶಾದ್ಯಂತ ಕಾಂಗ್ರೆಸ್ ಕಾರ್ಯರ್ತರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಇದು ತನಿಖಾ ಸಂಸ್ಥೆಗಳ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಮತ್ತು ಹಿಂದೆಂದೂ ರಾಜಕೀಯ ಕುಟುಂಬವು “ಅಕ್ರಮ ಸಂಪತ್ತನ್ನು” ರಕ್ಷಿಸಲು ತನಿಖಾ ಸಂಸ್ಥೆಗಳನ್ನು ಸುಲಿಗೆ ಮಾಡಲು ಪ್ರಯತ್ನಿಸಿಲ್ಲ. ‘‘ತಮ್ಮ ಭ್ರಷ್ಟಾಚಾರ ಬಯಲಾಗಿರುವುದರಿಂದ ತನಿಖಾ ಸಂಸ್ಥೆಗೆ ಬಹಿರಂಗವಾಗಿ ಒತ್ತಡ ಹೇರಲು ಕಾಂಗ್ರೆಸ್ ನಾಯಕರು ಬೀದಿಗಿಳಿದಿದ್ದಾರೆ’’ ಎಂದು ಸೃತಿ ಇರಾನಿ ಹೇಳಿದ್ದಾರೆ.

ಯಾರೂ ಕಾನೂನಿಗಿಂತ ಮೇಲಲ್ಲ, ರಾಹುಲ್ ಗಾಂಧಿ ಕೂಡ ಅಲ್ಲ ಎಂದು ಪ್ರತಿಪಾದಿಸಿದರು. ಇಡಿ ಪ್ರಕರಣವನ್ನು ಮಾಧ್ಯಮಗಳಿಗೆ ವಿವರಿಸಿದ ಸಚಿವರು, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಎಂಬ ಕಂಪನಿಯನ್ನು 1930 ರಲ್ಲಿ ಪತ್ರಿಕೆಯನ್ನು ಪ್ರಕಟಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದು 5,000 ಸ್ವಾತಂತ್ರ್ಯ ಹೋರಾಟಗಾರರನ್ನು ಷೇರುದಾರರನ್ನಾಗಿ ಹೊಂದಿತ್ತು ಆದರೆ ಈಗ ಗಾಂಧಿ ಕುಟುಂಬದ ನಿಯಂತ್ರಣದಲ್ಲಿದೆ. ಕಂಪನಿಯ ಮಾಲೀಕತ್ವವನ್ನು ಒಂದು ಕುಟುಂಬಕ್ಕೆ ವರ್ಗಾಯಿಸಲಾಗಿದೆ, ಇದರಿಂದಾಗಿ ಅದು ಪತ್ರಿಕೆಗಳನ್ನು ಪ್ರಕಟಿಸುವುದಿಲ್ಲ ಬದಲಿಗೆ ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ ಎಂದು ಆರೋಪಿಸಿದರು.

“ಈ ಕಂಪನಿಯು 2008 ರಲ್ಲಿ 90 ಕೋಟಿ ರೂ. ಸಾಲವನ್ನು ಹೊಂದಿತ್ತು ಮತ್ತು ಆಸ್ತಿ ವ್ಯವಹಾರವನ್ನು ಪ್ರವೇಶಿಸಲು ನಿರ್ಧರಿಸಿತು. 2010 ರಲ್ಲಿ ಐದು ಲಕ್ಷ ರೂ. ಆರಂಭಿಕ ಬಂಡವಾಳದೊಂದಿಗೆ ಯಂಗ್ ಇಂಡಿಯಾ ಎಂಬ ಇನ್ನೊಂದು ಕಂಪನಿಯನ್ನು ಸ್ಥಾಪಿಸಲಾಯಿತು ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ಅದರ ನಿರ್ದೇಶಕರನ್ನಾಗಿ ಮಾಡಲಾಯಿತು. ಕಂಪನಿಯಲ್ಲಿ ಶ್ರೀ ಗಾಂಧಿ ಮಾತ್ರ 75 ಪ್ರತಿಶತ ಪಾಲನ್ನು ಹೊಂದಿದ್ದರು. ಉಳಿದವು ಅವರ ತಾಯಿ ಸೋನಿಯಾ ಗಾಂಧಿ ಮತ್ತು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫೆರ್ನಾಂಡಿಸ್ ಅವರಂತಹ ಕಾಂಗ್ರೆಸ್ ನಾಯಕರ ಬಳಿ ಇತ್ತು.

ಒಟ್ಟು ಷೇರುಗಳ 99 ಪ್ರತಿಶತದಷ್ಟು AJL ನ ಒಂಬತ್ತು ಕೋಟಿ ಷೇರುಗಳು ಆಗ ಯಂಗ್ ಇಂಡಿಯಾಗೆ ವರ್ಗಾಯಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷವು ಎಜೆಎಲ್‌ಗೆ 90 ಕೋಟಿ ರೂ. ಸಾಲವನ್ನು ನೀಡಿತು, ಅದನ್ನು ಹಿಂತಿರುಗಿಸಬೇಕಾಗಿಲ್ಲ, ಪ್ರಜಾಸತ್ತಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿದವರು ತಮ್ಮ ಹಣವನ್ನು ಗಾಂಧಿ ಕುಟುಂಬದ ಒಡೆತನದ ಕಂಪನಿಗೆ ಹೋಗಲು ಉದ್ದೇಶಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

Exit mobile version