`ಉತ್ತಮ ವಾಗ್ಮಿಯಾದ ನಮ್ಮ ಪ್ರಧಾನಿ ಈಗ ಮೌನ’ : ಸೋನಿಯಾ ಗಾಂಧಿ!

Narendra modi

ಉದಯ್‌ಪುರ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮೋದಿಯವರ “ಕನಿಷ್ಠ ಸರಕಾರ, ಗರಿಷ್ಠ ಆಡಳಿತ” ನೀತಿಯು ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸಿದೆ.

ಅಲ್ಪಸಂಖ್ಯಾತರನ್ನು ಕ್ರೂರಗೊಳಿಸುವುದು ಮತ್ತು ಜನಸಾಮಾನ್ಯರ ಮೇಲೆ ರಾಜಕೀಯ ಬೆದರಿಕೆ ಹಾಕುವುದು, ತೀವ್ರ ನೋವಿನ ಸಂಗತಿ ಎಂದು ಹೇಳುವ ಮುಖೇನ ಪ್ರಧಾನಿ ಮೋದಿಯವರ ವಿರುದ್ಧ ಗುಡುಗಿದ್ದಾರೆ. ಇಂದು ಮಧ್ಯಾಹ್ನ ರಾಜಸ್ಥಾನದ ಉದಯಪುರದಲ್ಲಿ ಆರಂಭವಾದ “ಚಿಂತನ್ ಶಿವರ್” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ವಾಗ್ಮಿಯಾದ ಪ್ರಧಾನಿಯವರ ಮಾತುಗಳು ಹೆಚ್ಚು ಅಗತ್ಯವಿರುವಾಗಲೇ ಅವರು ಮೌನವಾಗಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷವು ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂದು ಹೇಳುತ್ತಲೇ ಇರುತ್ತದೆ.

ಇದರರ್ಥ ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು, ಜನರು ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಇರುವಂತೆ ಒತ್ತಾಯಿಸುವುದು, ಕೆಟ್ಟದಾಗಿ ಗುರಿಯಾಗಿಸುವುದು, ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಮತ್ತು ನಮ್ಮ ಗಣರಾಜ್ಯದ ಸಮಾನ ಪ್ರಜೆಗಳಾದ ಅಲ್ಪಸಂಖ್ಯಾತರನ್ನು ಬಲಿಪಶು ಮತ್ತು ಕ್ರೂರವಾಗಿ ನಡೆಸುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. “ಮಹಾತ್ಮ ಗಾಂಧಿ ಅವರ ಹಂತಕರನ್ನು ವೈಭವೀಕರಿಸುವುದು ಮತ್ತು ಜವಾಹರಲಾಲ್ ನೆಹರೂ ಅವರಂತಹ ನಾಯಕರು ಮಾಡಿದ ಕೆಲಸವನ್ನು ಇತಿಹಾಸದಿಂದ ಅಳಿಸಿಹಾಕುವುದು.

ಇದರರ್ಥ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು, ದಿಕ್ಕು ತಪ್ಪಿಸುವ ತಂತ್ರಗಳು ಮತ್ತು ಸಮಾಜವನ್ನು ವಿಭಜಿಸುವುದು. ಮತ್ತು ನಮ್ಮ ಹಳೆಯ ಬಹುತ್ವ ಮತ್ತು ಏಕತೆಯನ್ನು ದುರ್ಬಲಗೊಳಿಸುವುದು. ಕಾಂಗ್ರೆಸ್ ನಾಯಕರು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವಂತೆ ಒತ್ತಾಯಿಸಿದ ಸೋನಿಯಾ ಗಾಂಧಿ, ಕಾಂಗ್ರೆಸ್ ಸಂಘಟನೆಯಲ್ಲಿ ಬದಲಾವಣೆಗಳು ಇಂದಿನ ಅಗತ್ಯವಾಗಿದೆ ಮತ್ತು ಸಭೆಯು “ರಾಷ್ಟ್ರೀಯ ವಿಷಯಗಳ ಬಗ್ಗೆ ಚಿಂತನ ಮತ್ತು ಸಂಘಟನೆಯ ಬಗ್ಗೆ ಅರ್ಥಪೂರ್ಣವಾದ ಆತ್ಮಚಿಂತನೆ” ಬಗ್ಗೆ ಹೆಜ್ಜೆ ಇಡುತ್ತಿದೆ.

“ಸಂಘಟನೆಯಲ್ಲಿ ಬದಲಾವಣೆಗಳು ಇಂದಿನ ಅಗತ್ಯವಾಗಿದೆ, ನಾವು ನಮ್ಮ ಕೆಲಸದ ವಿಧಾನವನ್ನು ಬದಲಾಯಿಸಬೇಕಾಗಿದೆ ಎಂದು ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿ ಹೇಳಿದ್ದಾರೆ.

Exit mobile version