ಧರ್ಮಸ್ಥಳದ ಸೌಜನ್ಯ ಪ್ರಕರಣ ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ : ಫಿಲ್ಮ್ ಚೇಂಬರ್‌ನಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ

Ujire: ಧರ್ಮಸ್ಥಳದ (Dharmasthala) ಸೌಜನ್ಯ (Soujanya case Sandalwood Movie) ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು.

ಇದೀಗ ಈ ಪ್ರಕಾರಣವು ರಾಜ್ಯದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. ಸೌಜನ್ಯ ಉಜಿರೆ ಎಸ್.ಡಿ.ಎಂ ಕಾಲೇಜು(SDM College) ವಿದ್ಯಾರ್ಥಿನಿ ಆಗಿದ್ದರು. ಸೌಜನ್ಯಳನ್ನು ಅಪಹರಿಸಿ

ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ 2012ರ ಅಕ್ಟೋಬರ್‌ 10 ರಂದು ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್

ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಆದರೆ ಇತೀಚೆಗೆ ಬೆಂಗಳೂರು ಸಿಬಿಐ ಕೋರ್ಟ್ ಆರೋಪಿ ಸಂತೋಷ್ ರಾವ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ

ಕಾರಣ ಆತ ತಪ್ಪಿತಸ್ಥನಲ್ಲ ಎಂದು (Soujanya case Sandalwood Movie) ನಿರ್ಣಯಿಸಲಾಯಿತು.

ಸೌಜನ್ಯ ಪ್ರಕರಣ ಈ ತೀರ್ಪಿನ ಬಳಿಕ ಮತ್ತೆ ಭುಗಿಲೆದ್ದಿದೆ. ಸೌಜನ್ಯ ಪೋಷಕರು ಹಾಗೂ ಕೆಲ ಸಂಘಟನೆಗಳು ಇದೀಗ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ.ಧರ್ಮಸ್ಥಳ ಧರ್ಮಾಧಿಕಾರಿ

ವೀರೇಂದ್ರ ಹೆಗ್ಗಡೆ(Veerendra Hegde) ಕುಟುಂಬಸ್ಥರು ಹಾಗೂ ಇತರ ಕೆಲವರ ಮೇಲೆ ಮಾಡಿರುವ ಆರೋಪವನ್ನು ಇತ್ತ ಪೋಷಕರು ಹಾಗೂ ಸಂಘಟನೆಗಳು ಮತ್ತಷ್ಟು ಗಂಭೀರಗೊಳಿಸಿದ್ದಾರೆ.

ಈ ಬೆಳವಣಿಗೆ ನಡುವೆ ಇದೀಗ ಧರ್ಮಸ್ಥಳದಲ್ಲಿ ನಡೆದ ಇದೇ ಸೌಜನ್ಯ ಪ್ರಕರಣ ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ(Sandalwood) ಸಿನಿಮಾ ಸಿದ್ಧವಾಗುತ್ತಿದೆ. ಬೆಂಗಳೂರಿನ ಫಿಲ್ಮ್ ಚೇಂಬರ್‌ನಲ್ಲಿ

(Film Chamber) ಸೌಜನ್ಯ ಚಿತ್ರದ ಹೆಸರು ನೊಂದಣಿಯಾಗಿದೆ.

ಸಿನಿಮಾ ಟೈಟಲ್ ನೋಂದಣಿ
ಸಿನಿಮಾವನ್ನು ಸೌಜನ್ಯ ಅವರ ಜೀವನ ಆಧರಿಸಿ ಮಾಡಲಾಗುತ್ತಿದೆ ಎನ್ನಲಾಗಿದೆ. ‘ಸ್ಟೋರಿ ಆಫ್ ಸೌಜನ್ಯ’(Story of Sawjanya) ಟೈಟಲ್ (Title)ನೋಂದಣಿ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ

ಮಂಡಳಿಯಲ್ಲಿ ಆಗಿದೆ. ಈ ಟೈಟಲ್ ಅನ್ನು ಜಿಕೆ ವೆಂಚರ್ಸ್ (JK Ventures) ನೋಂದಣಿ ಮಾಡಿಸಿದೆ. ಈ ಚಿತ್ರವನ್ನು ವಿ. ಲವ (V.Lava)ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥಾ

ಹಂದರ ಈ ಚಿತ್ರವು ಹೊಂದಿರಲಿದೆ. ಕನ್ನಡದಲ್ಲಿ ಮಾತ್ರ ಈ ಚಿತ್ರ ಸಿದ್ಧವಾಗಲಿದೆ.

ಏನಿದು ಘಟನೆ?

ಧರ್ಮಸ್ಥಳ ಗ್ರಾಮದ ಪಾಂಗಾಳ(Pangala) ನಿವಾಸಿಗಳಾದ ಕುಸುಮಾವತಿ(Kusumavathi) ಮತ್ತು ಚಂದಪ್ಪ ಗೌಡ(Chandappa Gowda) ಪುತ್ರಿ ಸೌಜನ್ಯ ರವರ ಈ ಭೀಕರ ಕೊಲೆ ಪ್ರಕರಣದಲ್ಲಿ

ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಂತಾಗಿದೆ. 2012ರ ಅಕ್ಟೋಬರ್ 9ರಂದು ಉಜಿರೆಯ(Ujire) ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ ಸಂಜೆ

ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮಣ್ಣಸಂಕ ಬಳಿ ಮರುದಿನ ರಾತ್ರಿ ಆಕೆಯ ಮೃತದೇಹ ಪತ್ತೆಯಾಗಿತ್ತು.ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಬೆಳ್ತಂಗಡಿ

(Belthangadi) ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿತ್ತು.

ಇದನ್ನೂ ಓದಿ : ಮಣಿಪುರ ಕ್ರೌರ್ಯಕ್ಕೆ ಕಾರಣ ಏನು? : ಸುಳ್ಳನ್ನು ನಂಬಿ ಪ್ರತೀಕಾರ ತೆಗೆದುಕೊಳ್ಳಲು ಹೋಗಿ ದುಷ್ಕೃತ್ಯ…. ಇಲ್ಲಿದೆ ಅಸಲಿ ಕಾರಣ..

ಕಾರ್ಕಳ (Karkala) ತಾಲೂಕಿನ ಕುಕ್ಕುಂದೂರು (Kukkundooru) ಗ್ರಾಮದ ನಿವಾಸಿ ಸಂತೋಷ್ ರಾವ್ (Santhosh Rao) ಎಂಬಾತನನ್ನು ಶಂಕಿತ ಆರೋಪಿಯಾಗಿದ್ದ.ಈತನನ್ನು ಬಾಹುಬಲಿ

ಬೆಟ್ಟದ(Bahubali Hills) ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಸಿಐಡಿಗೆ (CID) ಈ ಪ್ರಕರಣವನ್ನು ನೀಡಲಾಗಿತ್ತು.ಆರು ಬಾರಿ ಸಿಬಿಐ

(CBI) ನ್ಯಾಯಾಲಯಕ್ಕೆ ಹಾಜರಾಗದೆ ಸಂತೋಷ್ ರಾವ್ ತಲೆಮರೆಸಿಕೊಂಡಿದ್ದ.

ಬೆಳ್ತಂಗಡಿ ಪೊಲೀಸರು ಆರಂಭದಲ್ಲಿ ರಾವ್ ಅವರನ್ನು ಬಂಧಿಸಿದ್ದರು, ಆದರೆ ನಂತರ ಅವರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲಿಲ್ಲ ಎಂದು ಹೇಳಲಾಗಿದೆ. ಹಲವಾರು ಹೋರಾಟಗಳ ನಂತರ ಸಿಬಿಐ

ತನಿಖೆಯನ್ನು ವಹಿಸಿಕೊಂಡಿತು. ಅಂತಿಮವಾಗಿ, ಸುದೀರ್ಘ 11 ವರ್ಷಗಳ ವಿಚಾರಣೆಯ ನಂತರ, ಸಿಬಿಐ ನ್ಯಾಯಾಲಯವು ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ

ತನ್ನ ಅಂತಿಮ ನಿರ್ಧಾರವನ್ನು ನೀಡಿದೆ.

ಬೆಂಗಳೂರು ಸಿಬಿಐ ಕೋರ್ಟ್

(CBI Court) ಆರೋಪಿ ಸಂತೋಷ್ ರಾವ್ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಆತ ತಪ್ಪಿತಸ್ಥನಲ್ಲ ಎಂದು ನಿರ್ಣಯಿಸಲಾಯಿತು. 2012ರ ಅಕ್ಟೋಬರ್‌ನಲ್ಲಿ

ಧರ್ಮಸ್ಥಳ ಬಳಿ ಸೌಜನ್ಯ ಸಾವನ್ನಪ್ಪಿದ 11 ವರ್ಷಗಳ ನಂತರ ಈ ತೀರ್ಪು ಬಂದಿದೆ.

ರಶ್ಮಿತಾ ಅನೀಶ್

Exit mobile version