• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಮಣಿಪುರ ಕ್ರೌರ್ಯಕ್ಕೆ ಕಾರಣ ಏನು? : ಸುಳ್ಳನ್ನು ನಂಬಿ ಪ್ರತೀಕಾರ ತೆಗೆದುಕೊಳ್ಳಲು ಹೋಗಿ ದುಷ್ಕೃತ್ಯ…. ಇಲ್ಲಿದೆ ಅಸಲಿ ಕಾರಣ..

Rashmitha Anish by Rashmitha Anish
in ದೇಶ-ವಿದೇಶ
ಮಣಿಪುರ ಕ್ರೌರ್ಯಕ್ಕೆ ಕಾರಣ ಏನು? : ಸುಳ್ಳನ್ನು ನಂಬಿ ಪ್ರತೀಕಾರ ತೆಗೆದುಕೊಳ್ಳಲು ಹೋಗಿ ದುಷ್ಕೃತ್ಯ…. ಇಲ್ಲಿದೆ ಅಸಲಿ ಕಾರಣ..
0
SHARES
1.9k
VIEWS
Share on FacebookShare on Twitter

Imphal : ಮಣಿಪುರದಲ್ಲಿ (Manipur) ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ನಡುವೆ ಇಬ್ಬರು ಕುಕಿ (Reason for Manipur Atrocity) ಸಮುದಾಯದ ಮಹಿಳೆಯರನ್ನು

ನಗ್ನವಾಗಿ ಪರೇಡ್‌ ಮಾಡಿದ ಘಟನೆಗೆ ದೇಶಾದ್ಯಂತ ದಿಗ್ಭ್ರಮೆ ಹಾಗೂ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಳೆದ ಕೆಲ ತಿಂಗಳುಗಳಿಂದ ಹಲವು

ಅಮಾಯಕ ಜೀವಗಳು ಬಲಿಯಾಗಿದೆ. ಇಡೀ ರಾಜ್ಯವನ್ನೇ ಕುಕಿ ಹಾಗೂ ಮೇಟಿ(Meti) ಸಮುದಾಯದ ನಡುವಿನ ಹೋರಾಟ ಸುಡುತ್ತಿದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಇದೀಗ ಇಬ್ಬರು ಕುಕಿ

ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಅಮಾನವೀಯ ಘಟನೆ ಭಾರತವನ್ನೇ ತಲೆ ತಗ್ಗಿಸುವಂತೆ (Reason for Manipur Atrocity) ಮಾಡಿದೆ.

ಮಣಿಪುರ ರಾಜ್ಯದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ (Video) ಇಡೀ ದೇಶದಲ್ಲಿ ವೈರಲ್ (Viral) ಆದ ಎರಡು ದಿನಗಳ ನಂತರ ಪ್ರಮುಖ ಆರೋಪಿಗಳಲ್ಲಿ

ಒಬ್ಬನಾದ ಹ್ಯುರೆಮ್ ಹೆರೋದಾಸ್ ಮೈತೇಯಿ(Hyrum Herodas Maithei) ಎಂಬಾತನ ಮನೆಗೆ ಗುರುವಾರ(Thursday) ಬೆಂಕಿ ಹಚ್ಚಲಾಯಿತು.ಈ ವೀಡಿಯೊದಲ್ಲಿ, ಪ್ರತಿಭಟನಾಕಾರರ ಗುಂಪಿನಲ್ಲಿ

ಹೆಚ್ಚಾಗಿ ಮಹಿಳೆಯರು ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಬಾಂಬ್ ದಾಳಿಗೆ ಪ್ಲ್ಯಾನ್‌ : ಐವರು ಶಂಕಿತ ಭಯೋತ್ಪಾದಕರು ಅರೆಸ್ಟ್‌ !

ಮಣಿಪುರದ ಕಾಂಗ್‌ಪೊಕ್ಪಿ(Kongpokpi) ಜಿಲ್ಲೆಯಲ್ಲಿ ಮೇ 4 ರಂದು ನಡೆದ ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಇದು ದೇಶಾದ್ಯಂತ

ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವೀಡಿಯೊದಲ್ಲಿ, ಕುಕಿ-ಜೋ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಲೈಂಗಿಕ ಕಿರುಕುಳ ನೀಡುತ್ತಾ ಮೆರವಣಿಗೆ ಮಾಡಿಕೊಂಡು

ಮೈದಾನವೊಂದಕ್ಕೆ ಕರೆದುಕೊಂಡು ಹೋಗಿದ್ದು ವಿಡಿಯೋದಲ್ಲಿ ಬಹಿರಂಗವಾಗಿದೆ . ನಂತರ 21 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.

Reason for Manipur Atrocity

ಈ ವಿಕೃತ ಘಟನೆಗೆ ಕಾರಣ ಏನು? ಫೇಕ್ ನ್ಯೂಸ್ ಕಾರಣ ಎಂದ ಪೊಲೀಸರು

ಮೇ 3 ರಂದು ಮಣಿಪುರದಲ್ಲಿ ಫೋಟೋವೊಂದು(Photo) ವೈರಲ್‌ ಆಗಿತ್ತು. ಕುಕಿ ಸಮುದಾಯದ ಪುರುಷನೊಬ್ಬ ಚುರಚಂದ್‌ಪುರ್‌ದಲ್ಲಿ ಮೈತೇಯಿ ಸಮುದಾಯದ ಮಹಿಳೆಯನ್ನು ಅತ್ಯಾಚಾರ

ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಪ್ಲಾಸ್ಟಿಕ್‌ ಚೀಲದಲ್ಲಿ ಆಕೆಯ ದೇಹವನ್ನು ಹಾಕಿದ್ದಾನೆ ಎಂದು ವಿವರಿಸುವ ಫೋಟೋವೊಂದು ವೈರಲ್‌ ಆಗಿತ್ತು. ಮೈತೇಯಿ ಸಮುದಾಯದ ಜನರನ್ನು

ಇದು ಭಾರೀ ಆಕ್ರೋಶಕ್ಕೆ ತಳ್ಳಿತ್ತು.

ಮೈತೇಯಿ ಸಮುದಾಯದ ಜನರು ಇದರಿಂದ ಉದ್ತಿಕ್ತಗೊಂಡು ಕುಕಿ ಸಮುದಾಯದ ಹಳ್ಳಿಗಳ ಮೇಲೆ ಮಾರನೇ ದಿನ ದಾಳಿ ಮಾಡಿ ಮಹಿಳೆಯರನ್ನು ನಗ್ನ ಪರೇಡ್‌ ಮಾಡಿ ಸಾಮೂಹಿಕ

ಅತ್ಯಾಚಾರ ಎಸಗಿದ್ದರು. ಆ ನಂತರ ಘಟನೆಗೆ ಕಾರಣವಾದ ಆ ಫೋಟೋ ನಕಲಿ ಎಂದು ಪತ್ತೆಯಾಗಿತ್ತು.

Manipur Atrocity

ಘಟನೆಯ ಹಿನ್ನೆಲೆ

ಆಧುನಿಕ ಶಸ್ತ್ರಗಳೊಂದಿಗೆ ಬಿ. ಫೈನಮ್ ಗ್ರಾಮಕ್ಕೆ 800- 1000ದಷ್ಟಿದ್ದ ಜನರು ನುಗ್ಗಿದ್ದರು. ಅಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ, ಆಸ್ತಿ ಪಾಸ್ತಿಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿ, ಲೂಟಿ ಮಾಡಿದ್ದರು.

ಮೈತೇಯಿ ಸಮುದಾಯಕ್ಕೆ ಈ ದುಷ್ಕರ್ಮಿಗಳು ಸೇರಿದವರು. ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಈ ದಾಳಿ ವೇಳೆ ಒಟ್ಟು ಐದು ಮಂದಿ ಸಮೀಪದ ಕಾಡಿಗೆ ಪರಾರಿಯಾಗಿ ಬಚ್ಚಿಟ್ಟುಕೊಂಡಿದ್ದರು.

ಇದನ್ನೂ ಓದಿ : 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !

ನಂತರ ನಾಂಗ್‌ಪೊಕ್ ಸೆಕ್ಮೈ ಪೊಲೀಸ್ ತಂಡವು ಆ 5 ಜನರನ್ನು ರಕ್ಷಿಸಿ ಠಾಣೆಗೆ ಕರೆದೊಯ್ಯುವ ವೇಳೆ ಆ ಗುಂಪು ಮತ್ತೆ ಅವರ ಮೇಲೆ ದಾಳಿ ನಡೆಸಿ ಅವರನ್ನು ಅಪಹರಿಸಿತ್ತು. ಅವರಲ್ಲಿ ಒಬ್ಬ ವ್ಯಕ್ತಿಯನ್ನು

ಈ ಕ್ರೂರಿಗಳು ಕೂಡಲೇ ಕೊಂದು ಹಾಕಿದ್ದರು. ನಂತರ ಬಲವಂತವಾಗಿ ಮೂವರೂ ಮಹಿಳೆಯರನ್ನು ವಿವಸ್ತ್ರಗೊಳಿಸಲಾಗಿತ್ತು. ನಂತರ ಸಾಮೂಹಿಕವಾಗಿ 21 ವರ್ಷದ ಒಬ್ಬ ಮಹಿಳೆಯನ್ನು

ಅತ್ಯಾಚಾರ ಮಾಡಲಾಗಿತ್ತು. ಅದನ್ನು ತಡೆಯಲು ಬಂದ ಆಕೆಯ 19 ವರ್ಷದ ಸಹೋದರನನ್ನು ಬರ್ಬರವಾಗಿ ಕೊಂದು ಹಾಕಲಾಗಿತ್ತು.

ರಶ್ಮಿತಾ ಅನೀಶ್

Tags: Indiamanipuraviral news

Related News

ಹೃದಯಾಘಾತಕ್ಕೆ ಬಾಲಕ ಬಲಿ: 9ನೇ ತರಗತಿ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದು ಸಾವು
ದೇಶ-ವಿದೇಶ

ಹೃದಯಾಘಾತಕ್ಕೆ ಬಾಲಕ ಬಲಿ: 9ನೇ ತರಗತಿ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದು ಸಾವು

September 21, 2023
ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌
ದೇಶ-ವಿದೇಶ

ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌

September 21, 2023
ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!
ದೇಶ-ವಿದೇಶ

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

September 21, 2023
ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?
ಡಿಜಿಟಲ್ ಜ್ಞಾನ

ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?

September 21, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.