Bengaluru: ದಕ್ಷಿಣ ಕರ್ನಾಟಕ ಭಾಗದ ಪ್ರಮುಖ ದಲಿತ ನಾಯಕ ಎಂದೇ ಖ್ಯಾತರಾಗಿದ್ದ (Srinivasa Prasad Political Journey) ಹಿರಿಯ ರಾಜಕೀಯ ನಾಯಕ ವಿ ಶ್ರೀನಿವಾಸಪ್ರಸಾದ್ (V Srinivas
Prasad) ಅವರ ರಾಜಕೀಯ ಬದುಕು ಅನೇಕ ಏಳುಬೀಳುಗಳ ಹಾದಿಯನ್ನ ಒಳಗೊಂಡಿತ್ತು. ದಲಿತರು ಹಾಗೂ ಶೋಷಿತರ ಪರ ಅನೇಕ ಹೋರಾಟಗಳನ್ನು ನಡೆಸುವ ಮೂಲಕ ದಮನಿತ ವರ್ಗಕ್ಕೆ ಶಕ್ತಿ
ನೀಡಿದ್ದರು ಶ್ರೀನಿವಾಪ್ರಸಾದ್. ಅವರ ರಾಜಕೀಯ (Srinivasa Prasad Political Journey) ಜೀವನ ಕೆಲ ಪ್ರಮುಖ ಸಂಗತಿಗಳ ಒಳನೋಟ ಇಲ್ಲಿದೆ.
ಶ್ರೀನಿವಾಸಪ್ರಸಾದ್ ಬೆಳೆದು ಬಂದ ಹಾದಿ :
1947 ಆಗಸ್ಟ್ (August) 6 ರಂದು ಮೈಸೂರು ನಗರದ ಅಶೋಕಪುರಂನ ಮಣೇಗಾರ್ ವೆಂಕಟಯ್ಯ ಅವರ ಪುತ್ರನಾಗಿ ಜನಿಸಿದರು. ಮೈಸೂರಿನಲ್ಲೇ ತಮ್ಮ ವ್ಯಾಸಾಂಗ ಪೂರ್ಣಗೊಳಿಸಿದ ಅವರು
ಅಂಬೇಡ್ಕರ್ ವಿಚಾರಧಾರೆಗಳನ್ನೇ ಉಸಿರಾಗಿಸಿಕೊಂಡು, ತಮ್ಮ ರಾಜಕೀಯ ಪಯಣ ಆರಂಭಿಸಿದರು.
• 1974 ರಲ್ಲಿ ಕೃಷ್ಣರಾಜ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಣ್ಣಾ ಡಿಎಂಕೆ (Anna DMK) ಬೆಂಬಲಿತ ಅಭ್ಯರ್ಥಿಯಾಗಿ ಪ್ರಥಮ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮಿಕಿದರು.
• ನಂತರ 1977ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಲೋಕದಳ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು.
• 1978ರಲ್ಲಿ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿಯೂ ಸೋಲುಂಡರು.
• ಬಳಿಕ ಚಾಮರಾಜನಗರ (Chamarajanagar) ಲೋಕಸಭಾ ಕ್ಷೇತ್ರದಿಂದ 1980, 1984, 1989, 1991 4 ಬಾರಿ ಸಂಸದರಾಗಿ ಆಯ್ಕೆಯಾದರು.
• 1998ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸೋಲು ಎದುರಿಸಬೇಕಾಯಿತು.
• 1999 ರಲ್ಲಿ ಲೋಕಶಕ್ತಿ ಬಿಜೆಪಿ ಸಂಯುಕ್ತ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು.
• 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ (Vajpayee) ಸಂಪುಟದಲ್ಲಿ ಆಹಾರ ಮತ್ತು ನಾಗರಿಕರ ಪೊರೈಕೆ ರಾಜ್ಯ ಖಾತೆ ಸಚಿವರಾದರು.
• 2008 ಹಾಗೂ 2013ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.
• 2017ರಲ್ಲಿ ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿಯಾಗಿ ಸೋಲುಂಡರು.
• 2019ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.
• ಶ್ರೀನಿವಾಸಪ್ರಸಾದ್ ಅವರು 6 ಬಾರಿ ಸಂಸದರಾಗಿ ಮತ್ತು 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಇದನ್ನು ಓದಿ: ಯೋಗ್ಯತೆಯಿಲ್ಲದ ನಾಲಾಯಕ್ ಚುನಾವಣಾ ಆಯೋಗ: ಮೋದಿ ಆಯ್ತು ಈಗ ಆಯೋಗದ ವಿರುದ್ದ ನಟ ಕಿಶೋರ್ ಕಿಡಿ