ಕಿಚ್ಚ ಸುದೀಪ್‌ಗೆ ದೇವಸ್ಥಾನ ನಿರ್ಮಿಸಿದ ಅಭಿಮಾನಿಗಳು

 ರಾಯಚೂರು ಡಿ 1 : ರಾಯಚೂರು ಜಿಲ್ಲೆಯಲ್ಲಿ ಅಭಿಮಾನಿಗಳು ಸುದೀಪ್ ದೇವಸ್ಥಾನ ಕಟ್ಟಿದ್ದಾರೆ. ಶಿರವಾರ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚನಿಗಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಸುಮಾರು 12ಲಕ್ಷ ವೆಚ್ಚದಲ್ಲಿ 3 ತಿಂಗಳಿನಿಂದ ದೇವಸ್ಥಾನ ನಿರ್ಮಾಣ ಕೆಲಸ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ದೇವಸ್ಥಾನ ಉದ್ಘಾಟನೆ ಮಾಡಲಾಗುತ್ತದೆ.

ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದ ಜನ ವಾಲ್ಮೀಕಿ ಗುಡಿ ಕಟ್ಟಲು ಮುಂದಾಗಿದ್ದರು, ಈ ವೇಳೆ ಕಿಚ್ಚ ಸುದೀಪ್​ ಅಭಿಮಾನಿಗಳು ನಮ್ಮ ಜನಾಂಗದ ನಾಯಕ ಈ ಮಟ್ಟಿಗೆ ಹೆಸರು ಮಾಡಿದ್ದು, ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರಿಗಾಗಿ ಗುಡಿ ಕಟ್ಟಬೇಕೆಂದು ಮುಂದಾಗಿದ್ದಾರೆ. ಈ ವೇಳೆ ಗ್ರಾಮದ ಬಸವ ನಾಯಕ ಉಚಿತವಾಗಿ 35-45 ಚದರ ಅಡಿ ವಿಸ್ತೀರ್ಣ ಜಾಗ ನೀಡಿದ್ದು, ಇಲ್ಲಿಂದ ಪ್ರಾರಂಭವಾದ ಕಿಚ್ಚನ ಗುಡಿ ನಿರ್ಮಾಣ ಇಂದು ಉದ್ಘಾಟನ ಹಂತದ ವರೆಗೂ ಬಂದು ತಲುಪಿದೆ.

Exit mobile version