Bengaluru: ಲೋಕ ಸಭಾ ಚುನಾವಣೆಯ (Loksabha Election) ಹಿನ್ನೆಲೆ ಎಲ್ಲ ಪಕ್ಷಗಳ ನಡುವೆ ಜಟಾಪಟಿ ಜೋರಾಗಿದೆ.ಎಚ್ಡಿ ಕುಮಾರಸ್ವಾಮಿ ಅವರು ನಾನು ವಿಷ ಹಾಕಿದ್ದೇನೆ ಎಂದು ಟೀಕಿಸಿದ್ದಕ್ಕೆ ನಾನು ಎಚ್ಡಿಕೆ ವಿಚಾರವಾಗಿ ಮಾತನಾಡಿದ್ದೇನೆ. ನಾನು ಸುಮಲತಾ ಸುದ್ದಿಗೆ ಹೋಗಿಲ್ಲ, ಕುಂಬಳಕಾಯಿ ಕಳ್ಳ ಎಂದರೆ ಸುಮಲತಾ ಅವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ನಿನ್ನೆಯಷ್ಟೇ ಡಿಕೆ ಶಿವಕುಮಾರ್ (D.K Shivakumar) ಹೇಳಿದ್ದರು.
ಅದಕ್ಕೆ ಈಗ ಸುಮಲತಾ ಅಂಬರೀಶ್ ಅವರು ಕುಂಬಳಕಾಯಿ ಕಳ್ಳರು ಯಾರೆಂದು ನಾನು ಹೇಳಬೇಕಾಗಿಲ್ಲ ಜನರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಮಂಡ್ಯಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಸುಮಲತಾ ಎಲ್ಲ ನಿರ್ಧಾರವನ್ನು ಮಂಡ್ಯದಲ್ಲಿಯೇ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದೇನೆ. ಅದೇ ರೀತಿ ನನ್ನ ನಿರ್ಧಾರವನ್ನು ಮಂಡ್ಯದಲ್ಲಿಯೇ ಹೇಳ್ತಿನಿ. ಮಂಡ್ಯ ಕ್ಷೇತ್ರದ ಜನ ನನ್ನ ಮನೆ ಜನರಿದ್ದಂತೆ ಅಭಿಮಾನಿಗಳ ಸಭೆಯಲ್ಲಿ ಮೂರ್ನಾಲ್ಕು ರೀತಿಯ ಅಭಿಪ್ರಾಯ ಬಂದಿದೆ ಅದೆಲ್ಲವನ್ನೂ ನಾನು ಮಂಡ್ಯದ ಸಭೆಯಲ್ಲಿ ಹೇಳುತ್ತೇನೆ.
ಎಚ್ಡಿ ಕುಮಾರಸ್ವಾಮಿ (H.D Kumaraswamy) ಅವರು ಭೇಟಿಯಾಗಿರುವುದು ಸೇರಿ ಎಲ್ಲ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಧರಿಸ್ತೀನಿ. ಈ ಸಭೆಗೆ ದರ್ಶನ್ ಹಾಗೂ ಅಭಿಷೇಕ್ (Darshan and Abhishek) ಸಭೆಗೆ ಬರುತ್ತಾರೆ ಎಂದು ಹೇಳಿದ್ದಾರೆ. ಅಂಬರೀಶ್ ಆಗಲಿ, ನಾನಾಗಲಿ ರಾಜಕಾರಣಕ್ಕೆ ನಾವು ಅಂಟಿಕೊಂಡಿಲ್ಲ. ಅಂಬರೀಶ್ (Ambarish) ಅವರು ಕೇಂದ್ರ ಸಚಿವರಾಗಿದ್ದಾಗ ಕಾವೇರಿ ನೀರಿನ ವಿವಾದ ಬಂದಾಗ ರಾಜೀನಾಮೆ ನೀಡಿದ್ದರು. ಅವರು ಯಾವುದಕ್ಕೂ ಆಸೆ ಪಟ್ಟಿಲ್ಲ.
2018ರಲ್ಲಿ ಬಿ ಫಾರಂ ಕೊಟ್ಟಾಗ ಅದನ್ನು ನಿರಾಕರಿಸಿ ಕಾಂಗ್ರೆಸ್ಗೆ (Congress) ವಾಪಸ್ ಕೊಟ್ಟರು. ಅದೆಲ್ಲವನ್ನು ನಾನು ನೋಡಿಕೊಂಡು ಬಂದಿದ್ದೇನೆ. ಹಾಗಾಗಿ ಅಧಿಕಾರಕ್ಕಾಗಿ, ಸ್ವಾರ್ಥ ರಾಜಕಾರಣಕ್ಕೆ ಆಸೆ ಪಟ್ಟವರಲ್ಲ. ನನ್ನ ಅವಶ್ಯಕತೆ ಎಲ್ಲಿ ಇಲ್ಲವೋ ಅಲ್ಲಿ ನಾನು ಕಾಲು ಹಾಕುವುದಿಲ್ಲ. ನನಗೂ ಯಾವ ಅವಶ್ಯಕತೆ ಇಲ್ಲ ನನಗೂ ಯಾರ ಅವಶ್ಯಕತೆಯೂ ಇಲ್ಲ ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.