ಅವಕಾಶ ಕೂಡಿಬಂದರೆ ತಪ್ಪದೇ ಮಂಡ್ಯ ಜಿಲ್ಲೆಗೆ ಭೇಟಿ ಕೊಡುವೆ : ನಟಿ ಸನ್ನಿ ಲಿಯೋನ್!

sunny leone

ಬಾಲಿವುಡ್(Bollywood) ನಟಿ(Actress) ಸನ್ನಿ ಲಿಯೋನ್(Sunny Leone) ಅವರು ಗುರುವಾರ ರಾಜಧಾನಿ ಬೆಂಗಳೂರಿಗೆ(Bengaluru) ಭೇಟಿ ನೀಡಿದ್ದು, ಕನ್ನಡ ಚಾಂಪಿಯನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಚಾಂಪಿಯನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಸನ್ನಿ ಲಿಯೋನ್ ಕಾರ್ಯಕ್ರಮ ಅಂತ್ಯವಾಗುವವರೆಗೂ ಎಲ್ಲರೊಡನೆ ಹಸನ್ಮುಖಿಯಾಗಿ ಮಾತನಾಡಿಸಿದ್ದಾರೆ. ಸನ್ನಿ ಲಿಯೋನ್ ಅವರು ಬೆಂಗಳೂರಿಗೆ ಆಗಮಿಸಿದ ಹಿನ್ನಲೆ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು. ಈ ಪೈಕಿ ನಿಮ್ಮ ಫೋಟೋ ತೋರಿಸಿ ಮಾಂಸದಲ್ಲಿ ರಿಯಾಯಿತಿ ಕೊಡ್ತಾರೆ ಮೇಡಂ ಈ ಬಗ್ಗೆ ನೀವೇನು ಹೇಳ್ತೀರಾ ಎಂಬ ಪ್ರಶ್ನೆಗೆ, ಮೊದಲಾಗಿ ನಾನು ಸಸ್ಯಹಾರಿ..ಪ್ರಾಣಿಗಳನ್ನು ಕೊಂದು ತಿನ್ನುವುದರ ಬಗ್ಗೆ ನನಗೆ ಯಾವುದೇ ನಂಬಿಕೆಯಿಲ್ಲ.

ಆದ್ರೆ ಇದು ಅವರಿಗೆ ಸರಿ ಎಂದು ಅನ್ನಿಸಿದರೆ, ಆ ಕೆಲಸ ಇಷ್ಟವಿದ್ದರೆ ಮಾಡಲಿ ಒಳ್ಳೆಯದಾಗಲಿ ಅಷ್ಟೇ ಎಂದು ಉತ್ತರಿಸಿದರು. ಇನ್ನು ವೇದಿಕೆಯ ಮೇಲೆ ಅವರು ಮಾತನಾಡುವಾಗಲೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮೇಡಂ ಒಂದು ಆಟೋಗ್ರಾಫ್ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಖಂಡಿತ ಎಂದು ಒಪ್ಪಿಕೊಂಡ ಸನ್ನಿ ಲಿಯೋನ್, ಯುವಕನ ಶರ್ಟ್ ಮೇಲೆ ಸಹಿ ಹಾಕಿ ಕೊಟ್ಟಿದ್ದಾರೆ. ಆ ಬಳಿಕ, ಕಳೆದ ಬಾರಿ ಸನ್ನಿ ಲಿಯೋನ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಬ್ಯಾನರ್ ಹಾಕಿಸಿ ಆಚರಣೆ ಮಾಡಿದ್ದ ಮಂಡ್ಯ ಯುವಕರ ತಂಡಕ್ಕೆ ನೀವೇನು ಹೇಳ್ತೀರಾ?

ಮಂಡ್ಯಗೆ ಭೇಟಿ ನೀಡ್ತೀರಾ ಎಂದು ಕೇಳಿದಾಗ, ಮಂಡ್ಯದ ಯುವಕರ ತಂಡಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ನಿಮ್ಮ ಪ್ರೀತಿ ನನಗೆ ತಲುಪಿದೆ, ನನ್ನ ಹೃದಯಕ್ಕೆ ಮುಟ್ಟಿದೆ. ನೀವು ತೋರಿಸಿರುವ ಈ ಪ್ರೀತಿಗೆ ನಾನು ಎಂದು ಕೃತಜ್ಞಳಾಗಿರುತ್ತೇನೆ. ಮಂಡ್ಯ ಅಭಿಮಾನಿಗಳನ್ನು ಯಾವಾಗ ಭೇಟಿ ಮಾಡ್ತೀನಿ ಎಂಬುದು ಗೊತ್ತಿಲ್ಲ. ಆದ್ರೆ ಖಂಡಿತ ಅವಕಾಶ ಕೂಡಿಬಂದಾಗ ಅವರನ್ನು ಭೇಟಿ ಮಾಡಿ, ಅವರೊಟ್ಟಿಗಿರೋ ಫೋಟೊಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.

Exit mobile version