ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪಕ್ಷದ ವಿನೂತನ ಪ್ರತಿಭಟನೆ.

Bengaluru:ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ 21 ರಾಜ್ಯಗಳು ಮತ್ತು (Surya Bundle Bank) ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಲ್ಲಿ ಇಂದು ಆರಂಭವಾಗಿದ್ದು

ಕರ್ನಾಟಕ ರಾಜ್ಯದಲ್ಲಿ ಮತದಾನಕ್ಕೆ ಸಂಪೂರ್ಣ ತಯಾರಿ ನಡೆಯುತ್ತಿದೆ. ಇನ್ನು ಗುರು ರಾಘವೇಂದ್ರ ಬ್ಯಾಂಕ್ (Guru Raghavendra Co Operative Bank) ಹಗರಣ ಮುಂದಿಟ್ಟುಕೊಂಡು ಬೆಂಗಳೂರು

ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಕಾಂಗ್ರೆಸ್ (Congress) ಪಕ್ಷ ವಿನೂತನ ಪ್ರತಿಭಟನೆ, ಪ್ರಚಾರ ನಡೆಸುತ್ತಿದ್ದು ಅದು ಮತದಾರರಿಗೆ ಇರಿಸು ಮುರಿಸು

ಉಂಟು ಮಾಡುತ್ತಿದೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ ಕೈಪಡೆ, ತೇಜಸ್ವಿ ಸೂರ್ಯ ಭಾವಚಿತ್ರ ಇರುವ ನಕಲಿ ಎಟಿಎಂ ಕಾರ್ಡ್ (Fake ATM Card) ವಿತರಣೆ ಮಾಡಿ

ತೇಜಸ್ವಿ ಸೂರ್ಯ ಆವರ ಕುರಿತು ಜನರಿಗೆ ಮಾಹಿತಿ ನೀಡುತ್ತಿದೆ.

ಇನ್ನು ಈಗಾಗಲೇ ಮತದಾರರಿಗೆ ಹಂಚುತ್ತಿರುವ ನಕಲಿ ಎಟಿಎಂ ಕಾರ್ಡ್​ನಲ್ಲಿ ತೇಜಸ್ವಿ ಸೂರ್ಯ ಹಣ ಪಡೆದು ಆಶ್ವಾಸನೆ ನೀಡುತ್ತಿರುವ ರೀತಿಯ ಫೋಟೋ ಅಳವಡಿಕೆ ಮಾಡಲಾಗಿದೆ. ಅಲ್ಲದೇ, ಎಟಿಎಂ

ಕಾರ್ಡ್ ಮೇಲೆ ಎಸ್​​ಬಿಬಿ ಬ್ಯಾಂಕ್ ಎಂದು ಉಲ್ಲೇಖಿಸಲಾಗಿದೆ. ಎಸ್​​ಬಿಬಿ ಬ್ಯಾಂಕ್ ಎಂದರೆ, ‘ಸೂರ್ಯ ಬಂಡಲ್ ಬ್ಯಾಂಕ್’ (Surya Bundle Bank) ಎಂದು ಆ ಕಾರ್ಡಿನ ಮೇಲೆ ನಮೂದಿಸಲಾಗಿದೆ.

ಮನೆ ಮಕ್ಕಳನ್ನು ನಂಬಿ ಆದರೆ ಸೂರ್ಯನ ನಂಬಿ ಬ್ಯಾಂಕ್​ನಲ್ಲಿ ಹಣ ಇಡಬೇಡಿ ಎಂದೂ ಕೂಡ ಕಾರ್ಡ್ ಮೇಲೆ ಮುದ್ರಣ ಮಾಡಲಾಗಿದೆ. ಹಾಗೂ ಕಾರ್ಡ್ ಮೇಲೆ 100% ನೋ ಮನಿ ಬ್ಯಾಕ್ ಎಂದು

ಮುದ್ರಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಾದ್ಯಂತ ಈ ನಕಲಿ ಎಟಿಎಂ ಕಾರ್ಡ್ ವಿತರಣೆ ಮಾಡಿದ್ದು ಈ ಮೂಲಕ ಗುರು ರಾಘವೇಂದ್ರ ಬ್ಯಾಂಕ್ ಹಗರಣವನ್ನು ಚುನಾವಣಾ ಪ್ರಚಾರಕ್ಕಾಗಿ

ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ.

ಈ ಹೊಸ ತಂತ್ರದ ಪ್ರಚಾರದಿಂದಾಗಿ ಜನ ಮಾತ್ರ ಗೊಂದಲಕ್ಕೀಡಾಗುವಂತಾಗಿದೆ. ತೇಜಸ್ವಿ ಸೂರ್ಯ ಭಾವಚಿತ್ರ ಇರುವ ನಕಲಿ ಎಟಿಎಂ ಕಾರ್ಡ್ ನೋಡಿ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ.

ಇದೀಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಲ್ಲೂ ಈ ಪ್ರಚಾರ ಮಾಡಲು ಕಾಂಗ್ರೆಸ್ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೋಟೆಲ್ ಅಂಗಡಿಗಳಿಗೆ ಈ ನಕಲಿ ಎಟಿಎಂ

ಕಾರ್ಡ್​​ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ವಿತರಿಸುವ ಮೂಲಕ ಬಿಜೆಪಿ ಪಕ್ಷದ ನಾಯಕ ತೇಜಸ್ವಿ ಸೂರ್ಯ ವಿರುದ್ದ ವಿಭಿನ್ನ ರೀತಿಯ ಅಭಿಯಾನ ಆರಂಭಿಸಿದ್ದಾರೆ.

ಇದನ್ನು ಓದಿ: ಅಚ್ಚೇ ದಿನ್ ಆಯೇಗಾ ಮಾತಿಗಷ್ಟೇ , ಇದುವರೆಗೂ ಒಳ್ಳೆದಿನ ಬರಲಿಲ್ಲ: ಸಿದ್ಧರಾಮಯ್ಯ

Exit mobile version