
ಪದ್ಮಶ್ರೀ ವಾಪಾಸ್: ಸುಕ್ರಜ್ಜಿ ನೋವಿನ ನಿರ್ಧಾರ.
ಸರ್ಕಾರಕ್ಕೆ ಹಾಲಕ್ಕಿ ಮಕ್ಕಳ ಕೂಗು ಕೇಳುತ್ತಿಲ್ಲ. ಇವರ ಕೂಗು ಸರ್ಕಾರದ ಮಟ್ಟಕ್ಕೆ ತಲುಪಿಸಲು, ದನಿ ಇಲ್ಲದ ಹಾಲಕ್ಕಿ ಮಕ್ಕಳಿಗೆ ದನಿಯಾಗಲು ವಿಜಯಟೈಮ್ಸ್ನ ಕವರ್ಸ್ಟೋರಿ ತಂಡ ಹಾಲಕ್ಕಿ ಒಕ್ಕಲು ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನ ಮಾಡಲು ಪ್ರಾರಂಭ ಮಾಡಿದಾಗ ಕೆಲ ಅಚ್ಚರಿಯ, ನೋವಿನ ಸಂಗತಿಗಳು ಬಯಲಾದವು. ಇದೇ ಸಂದರ್ಭದಲ್ಲಿ ಸುಕ್ರಜ್ಜಿ ತಮ್ಮ ಮನದಾಳದ ನೋವನ್ನು ಬಿಚ್ಚಿಟ್ಟು, ಪದ್ಮಶ್ರೀ ಪ್ರಶಸ್ತಿ ಹಿಂದಕ್ಕೆ ಕೊಡುವ ಮಾತನ್ನು ಹೇಳಿದ್ರು.