
ರಾಜ್ಯೋತ್ಸವಕ್ಕೆ ‘ನಮ್ಮ ಊರಿನ ರಸಿಕರು’
ಕನ್ನಡದ ಅಮರ ಕಲಾವಿದರಾದ ದಿ.ನರಸಿಂಹರಾಜು ಅವರ ಮೊಮ್ಮಕಳಾದ ಅರವಿಂದ್ ಹಾಗೂ ಅವಿನಾಶ್ ಚಿತ್ರರಂಗದಲ್ಲಿ ಚಿರಪರಿಚಿತರು. ಈಗ ಇವರು ಕೆಲವು ಸ್ನೇಹಿತರೊಂದಿಗೆ ಸೇರಿ ಕಟ್ಟೆ ಎಂಬ ಹೆಸರಿನ ಕನ್ನಡ ಒಟಿಟಿ ಆರಂಭಿಸುತ್ತಿದ್ದು ಅದಕ್ಕೆ ಕನ್ನಡ ರಾಜ್ಯೋತ್ಸವದಂದು ಚಾಲನೆ ನೀಡಿ ಈ ವೆಬ್ ಸೀರೀಸ್ ಪ್ರಸಾರ ಮಾಡಲಿದ್ದಾರೆ. ಕ್ಯಾರಂಬೋಲ, ಮ್ಯಾಂಗೋ ಹೌಸ್ ಮತ್ತು ಕಟ್ಟೆ ಈ ವೆಬ್ ಸರಣಿಯನ್ನು ನಿರ್ಮಿಸಿದೆ. ನಂದಿತಾ ಯಾದವ್ ಅವರು ಇದರ ನಿರ್ದೇಶಕಿ.