Bengaluru: ಇತ್ತೀಚೆಗೆ ರಾಜಧಾನಿಯಲ್ಲಿ ಕಳ್ಳತನ ಹೆಚ್ಚಾಗ್ತಿದೆ. ದಿನಕ್ಕೆ ಹಲವು ಪ್ರಕರಣಗಳು ದಾಖಲಾಗುತ್ತಿರುತ್ತವೆ. ಆದ್ರೆ (Thief Gang In Blore) ಬೆಂಗಳೂರಲ್ಲೊಂದು
ವಿಚಿತ್ರ ಕಳ್ಳತನ ಪ್ರಕರಣ ದಾಖಲಾಗಿದೆ. ಮೊಬೈಲ್, ಲ್ಯಾಪ್ಟಾಪ್, ವಾಚ್, ಸನ್ಗ್ಲಾಸ್, ಅಷ್ಟೇ ಯಾಕೆ ಬ್ಯಾಂಡೆಡ್ ಬ್ಯಾಗ್ಗಳನ್ನ (Banded Bag) ಕಳ್ಳತನ ಮಾಡೋರ್ ಇಲ್ಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಹನ ಚಾಲಕರ ಗಮನ ಸೆಳೆದು ಕಳ್ಳತನ ಮಾಡುವ ಗ್ಯಾಂಗ್ ಒಂದು ಬೆಂಗಳೂರಿನಲ್ಲಿ (Thief Gang In Blore) ಬೀಡು ಬಿಟ್ಟಿದೆ.ನೀವೇನಾದರೂ
ಬಳ್ಳಾರಿ ರಸ್ತೆಯ ಕೊಡಿಗೇಹಳ್ಳಿ ಜಂಕ್ಷನ್ (Kodigehalli Junction) ಬಳಿ ವಾಹನ ಚಲಿಸುತ್ತಿದ್ದರೆ ಮೊದಲು ನಿಮ್ಮ ಕಾರಿನ ಗ್ಲಾಸ್ಅನ್ನು ಯಾರಾದರೂ ತೆಗೆಯಲು ಹೇಳಿದರೆ
ಕೇಳಲೇ ಬೇಡಿ.
ಯಾಕಂದ್ರೆ ಆಸ್ಟರ್ ಸಿಎಂಆಯ್ ಅಲ್ಲಿ ಡಾಕ್ಟರ್ ಆಗಿರುವ ಭಾಗ್ಯಶ್ರೀ (Bhagyashree) ಎನ್ನುವವರ ಕಾರಿನ ಗ್ಲಾಸ್ ತೆಗೆಸಿ ಆ್ಯಪಲ್ ಐ ಫೋನ್ (iPhone) ಅನ್ನೇ ದೋಚಿದ್ದಾರೆ
ಈ ಕಳ್ಳರು. ಹೌದು ಡಾಕ್ಟರ್ ಭಾಗ್ಯಶ್ರೀ ಫೆ.5ರಂದು ಸಮಾರು 6 ಗಂಟೆ ಸುಮಾರಿಗೆ ಅವರ ಪತಿ ವಿಶಾಲ್ ನಾಯಕ್ (Vishal Nayak) ಅವರೊಂದಿಗೆ ಕಾರಿನಲ್ಲಿ ಹೋಗುವಾಗ
ಜಂಕ್ಷನ್ ಬಳಿ ಇರುವ ಫ್ಯಾಬ್ ಇಂಡಿಯಾ ಶೋ ರೂಮ್ ಮುಂದೆ ಕಾರಿನ ಗ್ಲಾಸ್ ಇಳಿಸುವಂತೆ ಕೇಳಿದ್ದಾರೆ. ಆದರೆ ಇವರು ಕಾರ್ ಗ್ಲಾಸ್ ಇಳಿಸದ ಹಿನ್ನೆಲೆ ಜೋರಾಗಿ ಗ್ಲೌಸ್ ಬಡಿದಿದ್ದಾರೆ.
ಕೊನೆಗೆ ಬೇಸರಗೊಂಡು ವಿಶಾಲ್ ನಾಯಕ್ ಕಾರಿನ ಗ್ಲಾಸ್ (Car Glass) ಇಳಿಸುತ್ತ ಹಾಗೆ ಕಾರಿನ ಸೀಟ್ ಮೇಲಿದ್ದ ಆಪಲ್ ಆಯ್ ಫೋನ್ ಅನ್ನು ಹೊತ್ತೊಯ್ದಿದ್ದಾರೆ. ಕಳೆದೊಂದು
ವಾರದಿಂದ ಈ ರಸ್ತೆಯಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದ್ದು ಪೋಲಿಸರು (Police) ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: ರಣಜಿ ಟ್ರೋಫಿಯನ್ನು ರದ್ದುಗೊಳಿಸಬೇಕು- ಕ್ರಿಕೆಟಿಗ ಮನೋಜ್ ತಿವಾರಿ!