ಇನ್ನೂ ಬಗೆಹರಿಯದ ಸಿಎಂ ಬದಲಾವಣೆ ಗೊಂದಲ: ಬಿಎಸ್ವೈ ನಾಯಕತ್ವ ಬದಲಾವಣೆಯ ಕೂಗಿನ ನಡುವೆ ಭಿನ್ನರಿಂದ ಬಿಜೆಪಿ ಹೈಕಮಾಂಡ್ ಭೇಟಿ

ಬೆಂಗಳೂರು,ಜೂ.14: ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಬೆಳವಣಿಗೆ ಗರಿಗೆದರಿದೆ.

ಕಳೆದ ಮೂರು ದಿನದಿಂದ ದೆಹಲಿಯಲ್ಲಿ ಟಿಕಾಣಿ ಹೂಡಿರುವ ಶಾಸಕ ಅರವಿಂದ್ ಬೆಲ್ಲದ್ ಅವರು ಬಿಜೆಪಿಯ ನಾಯಕರು ‌ಸೇರಿದಂತೆ ಆರ್ ಎಸ್ಎಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೂನ್ 16ರ ಬೆಂಗಳೂರು ಭೇಟಿ ಮತ್ತಷ್ಟು ಮಹತ್ವ ಪಡೆದಿದೆ.

ಜೂನ್ 17ರಂದು ಅರುಣ್ ಸಿಂಗ್ ಅವರು ಬಿಜೆಪಿ ಕೋರ್ ಕಮಿಟಿ ಕೂಡ ನಡೆಸಲಿದ್ದಾರೆ
ಒಂದು ತಿಂಗಳ ಅವಧಿಯಲ್ಲಿ ಅರವಿಂದ್ ಬೆಲ್ಲದ್ ಅವರು ಮೂರು ಬಾರಿ‌ ದೆಹಲಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯ ಬೆಳವಣಿಗೆ ಚುರುಕು ಪಡೆದಿದೆ.

Exit mobile version