ವಂಚಕ ಯುವರಾಜ್ ಪ್ರಕರಣದಲ್ಲಿ ದಿಕ್ಕು ತಪ್ಪಿಸಲಾಗುತ್ತಿದೆ: ದಿನೇಶ್ ಗುಂಡೂರಾವ್

ಬೆಂಗಳೂರು, ಜ. 09: ಕೋಟ್ಯಾಂತರ ರೂ. ವಂಚನೆ ಆರೋಪ ಎದುರಿಸುತ್ತಿರುವ ಯುವರಾಜ್ ಪ್ರಕರಣದಲ್ಲಿ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಯುವರಾಜ್ ವಿರುದ್ಧದ ಪ್ರಕರಣ ದಿಕ್ಕು ತಪ್ಪಿಸುವ ಯತ್ನದಂತಿದೆ. ಯುವರಾಜ್‌ಗೆ ಆರ್.ಎಸ್.ಎಸ್ ಹಾಗೂ ಬಿಜೆಪಿ ಮುಖಂಡರ ಸಖ್ಯ ಇರುವುದು ಸುಳ್ಳೆ? ಈ ಸಖ್ಯದ ಆಧಾರದಲ್ಲೇ ಕೊಟ್ಯಂತರ ರೂ ವಂಚನೆಯಾದ ವಿಷಯ ಸಿಸಿಬಿ ತನಿಖೆಯಿಂದ ಬಹಿರಂಗವಾಗಿದೆ.
ಆದರೆ ಸಿಸಿಬಿ‌ ಪೊಲೀಸರು ಈ ಕೋನದಲ್ಲಿ ತನಿಖೆಯೇ ನಡೆಸದಿರುವುದು ಅನುಮಾನ ಮೂಡಿಸುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ, ವಂಚನೆ ಪ್ರಕರಣದ ಆರೋಪಿ ಯುವರಾಜ್‌ನನ್ನು ಆರ್.ಎಸ್.ಎಸ್ ಮತ್ತು ಬಿಜೆಪಿ ನಾಯಕರು ಪಡಸಾಲೆಯೊಳಗೆ ಬಿಟ್ಟುಕೊಳ್ಳದೆ ಆತ ಗಣ್ಯ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸಲು ಸಾಧ್ಯವೇ?

ಸಿಸಿಬಿ ಪೊಲೀಸರು ಯುವರಾಜ್ ಜೊತೆ ಸಂಪರ್ಕದಲ್ಲಿದ್ದ ಆರ್.ಎಸ್.ಎಸ್ ಹಾಗೂ ಬಿಜೆಪಿ ಮುಖಂಡರು ಯಾರು?
ಸ್ವಾಮಿ ಜೊತೆಗೆ ಆ ನಾಯಕರ ವ್ಯಾವಹಾರಿಕ ಸಂಬಂಧವೇನು ಎಂಬುದರ ಬಗ್ಗೆಯೂ ತನಿಖೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.

Exit mobile version