ವಂಚಕ ಯುವರಾಜ್’ಗೂ ಸಂಘ ಪರಿವಾರಕ್ಕೂ ಸಂಬಂಧವಿಲ್ಲ: ಮಾ.ವೆಂಕಟರಾಮ್ ಸ್ಪಷ್ಟನೆ

ಮೈಸೂರು, ಜ. 07: ತನಗೆ ಆರ್’ಎಸ್’ಎಸ್ ಮುಖಂಡರು, ಬಿಜೆಪಿ ಮುಖಂಡರಾದ ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವರ ಪರಿಚಯ ಇದೆ ಎಂದು ಜನರಿಗೆ ಕೋಟ್ಯಾಂತರ ರೂ.ವಂಚಿಸಿ ಬಂಧನಕ್ಕೆ ಒಳಗಾಗಿರುವ ಯುವರಾಜ್ ಗೂ ಸಂಘ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಮಾ.ವೆಂಕಟರಾಮ್ ಹೇಳಿದರು.

ಮೈಸೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯುವರಾಜ ಎಂಬ ವ್ಯಕ್ತಿ ಆರ್. ಎಸ್.ಎಸ್ ನವನಲ್ಲ. ಅವನಿಗೂ ಆರ್.ಎಸ್‌.ಎಸ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಜೀವಮಾನದಲ್ಲಿ ಅವನನ್ನು ನೋಡಿಲ್ಲ ಎಂದು ಹೇಳಿದರು.

ನಮ್ಮ ಸಂಘಕ್ಕೆ ಮಸಿ ಬಳಿಯುವುದಕ್ಕೆ ನಡೆದಿರುವ ಷಡ್ಯಂತ್ರ ಇದಾಗಿದೆ. ಸಾರ್ವಜನಿಕರು ಇಂತಹ ಮೋಸಗಾರರಿಗೆ ಬಲಿಯಾಗಬಾರದು ಎಂದು ಹೇಳಿದರು.

Exit mobile version