ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ತರಕಾರಿಗಳನ್ನು ಹೆಚ್ಚಾಗಿ ತಿನ್ನಿ

Health tips for Sugar Patients: ಸಕ್ಕರೆ ಕಾಯಿಲೆ ಅನ್ನೋದು ಸರ್ವೇ ಸಾಮಾನ್ಯವಾಗಿದ್ದು, (Vegetable for Sugar Patients) ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಇದ್ದರೆ ಅಥವಾ

ಒಂದು ವೇಳೆ ನಿಮಗೆ ಡಯಾಬಿಟಿಸ್ (Diabetes) ಇದ್ದರೆ, ಸೇವಿಸುವ ಆಹಾರ ಪದ್ಧತಿಯ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಏಕೆಂದರೆ ತುಂಬಾ ಜನರಿಗೆ ಆಹಾರ ಸೇವನೆ ಮಾಡಿದ ತಕ್ಷಣ ರಕ್ತದಲ್ಲಿ ಸಕ್ಕರೆ

ಪ್ರಮಾಣದ ಏರಿಕೆ ಕಾಣುತ್ತದೆ. ಹಾಗಾಗಿ ಅಂತಹ ಆಹಾರಗಳಿಗೆ ಆದ್ಯತೆ ಕೊಡದೆ ಮಧುಮೇಹಿ ಸ್ನೇಹಿ ಎನ್ನಲಾದ ತರಕಾರಿಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಹಾಗಾದರೆ ಆ ತರಕಾರಿಗಳ (Vegetable for Sugar Patients) ಬಗ್ಗೆ ತಿಳಿದುಕೊಳ್ಳೋಣ.

ಬ್ರೊಕೋಲಿ:
ಬ್ರೊಕೋಲಿಯು (Broccoli) ಕ್ರೋಮಿಯಂ ಖನಿಜಾಂಶವನ್ನು ಅಪಾರವಾಗಿ ಹೊಂದಿದ್ದು, ದೇಹದಲ್ಲಿ ಗ್ಲುಕೋಸ್ ಬಳಕೆಯನ್ನು ಅಭಿವೃದ್ಧಿಪಡಿಸುತ್ತದೆ.


ಸಂಶೋಧಕರು ಹೇಳುವಂತೆ ಯಾರಿಗೆ ಮಧುಮೇಹ ಇರುತ್ತದೆ ಅವರಿಗೆ ದೇಹದಲ್ಲಿ ಈ ಒಂದು ಖನಿಜಾಂಶ ಕಡಿಮೆ ಇರುತ್ತದೆ. ಹಾಗಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಬ್ರೊಕೋಲಿ ಸೇರಿಸಿ ಕೊಂಡು

ಸೇವಿಸುವುದು ಉತ್ತಮ.

ಹಾಗಲಕಾಯಿ:
ಸಕ್ಕರೆ ಕಾಯಿಲೆ ಇರುವವರಿಗೆ ಹಾಗಲಕಾಯಿ (Bitter Guard) ರಾಮಬಾಣ ಎಂದು ಹೇಳಬಹುದು ಏಕೆಂದರೆ ಇದರಲ್ಲಿ ದೇಹದ ರಕ್ತದ ಹರಿವಿನಲ್ಲಿ ಕಂಡು ಬರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣ

ಮಾಡುವ ಗುಣವಿದೆ. ಹೀಗಾಗಿ ಊಟ ಆದ ನಂತರದಲ್ಲಿ ಸ್ವಲ್ಪ ಹಾಗಲಕಾಯಿ ಪಲ್ಯವನ್ನು ಸೇವಿಸುವುದರಿಂದ ಇದ್ದಕ್ಕಿದ್ದಂತೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗುವ ಸಾಧ್ಯತೆಯನ್ನು ತಡೆಯಬಹುದು.

ಬೆಂಡೆಕಾಯಿ ಮತ್ತು ಬಟಾಣಿ:
ಕರಗುವ ನಾರಿನ ಅಂಶವನ್ನು ಹೆಚ್ಚಾಗಿ ಒಳಗೊಂಡಿರುವ ಈ ತರಕಾರಿ ಪದಾರ್ಥಗಳು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು.


ಕೇವಲ ಹಸಿ ಬಟಾಣಿ ಮಾತ್ರವಲ್ಲದೆ ಒಣಗಿದ ಬೇಳೆ ಕಾಳಿನ ರೂಪದ ಬಟಾಣಿ, ಒಣಗಿದ ಬೀನ್ಸ್ (Beans), ಕಡಲೆ ಬೇಳೆ ಈ ರೀತಿ ಕಡಿಮೆ ಸಿಹಿ ಸೂಚ್ಯಂಕ ಹೊಂದಿರುವ ಕಾಳುಗಳನ್ನು ಸೇವಿಸಿ ಹೊಟ್ಟೆ ಹಸಿವನ್ನು

ಕಡಿಮೆ ಮಾಡಿಕೊಳ್ಳಬಹುದು.​

ನುಗ್ಗೆಸೊಪ್ಪು:
ಸಕ್ಕರೆ ಕಾಯಿಲೆ ನುಗ್ಗೆಸೊಪ್ಪು ಇರುವವರಿಗೆ ಬಹಳ ಒಳ್ಳೆಯದು. ಏಕೆಂದರೆ ಇದರಲ್ಲಿ ನೈಟ್ರಿಕ್ ಆಮ್ಲವನ್ನು ಕಡಿಮೆ ಮಾಡುವ ಗುಣವಿದೆ. ಜೊತೆಗೆ ಗ್ಲುಕೋಸ್ (Glucose) ಅಂಶವನ್ನು ನಿಯಂತ್ರಣ ಕೂಡ

ಮಾಡುತ್ತದೆ. ಹೀಗಾಗಿ ವಾರದಲ್ಲಿ ಎರಡು ಬಾರಿ ನುಗ್ಗೆ ಸೊಪ್ಪಿನ ಆಹಾರ ಪದಾರ್ಥ ಗಳನ್ನು ತಯಾರಿಸಿ ಸೇವಿಸುವುದು ಉತ್ತಮ.

ಮೆಂತ್ಯೆ ಸೊಪ್ಪು:
ಇನ್ನು ಸೇವಿಸಿದ ಆಹಾರದಲ್ಲಿ ಕಂಡು ಬರುವ ಸಕ್ಕರೆ ಅಂಶವನ್ನು ಜೀರ್ಣಪ್ರಕ್ರಿಯೆ ಸಂದರ್ಭದಲ್ಲಿ ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುವುದರ ಜೊತೆಗೆ ಪ್ಯಾಂಕ್ರಿಯಾಸ್ (Pancreas) ಭಾಗದಿಂದ

ಇನ್ಸುಲಿನ್ (Insulin) ಉತ್ಪತ್ತಿಯನ್ನು ಹೆಚ್ಚಾಗುವಂತೆ ಮಾಡುವ ಸಾಮರ್ಥ್ಯ ಇದರಲ್ಲಿದ್ದು, ಈ ಕಾಯಿಲೆ ಇರುವವರು ಆಗಾಗ ಮೆಂತ್ಯ ಸೊಪ್ಪು ಬಳಸಿ ಅಡುಗೆ ಮಾಡಿ ಸವಿಯುವುದು ಉತ್ತಮ. ಖಾಲಿ

ಹೊಟ್ಟೆಯಲ್ಲಿ ನೆನೆಸಿದ ಮೆಂತ್ಯ ಕಾಳುಗಳನ್ನು ಮತ್ತು ಅದರ ನೀರನ್ನು ಸಹ ಸೇವಿಸುವುದು ಇನ್ನು ಒಳ್ಳೆಯದು.​

ಇದನ್ನು ಓದಿ: ಮಂಗನ ದಾಳಿಯಿಂದ ವ್ಯಕ್ತಿಯ ಸಾವು : ವ್ಯಕ್ತಿಯನ್ನು ಕೊಂದ ಮಂಗ ಕೊನೆಗೂ ಸೆರೆ

Exit mobile version