ಪ್ರಧಾನಿ ಅವರ ಮಾತುಗಳಿಂದ ನಾನು ಪ್ರಭಾವಿತನಾದೆ : ರಾಕಿಂಗ್‌ ಸ್ಟಾರ್‌ ನಟ ಯಶ್

Bengaluru : ಕನ್ನಡ ಚಿತ್ರರಂಗದ ರಾಕಿಂಗ್‌ ಸ್ಟಾರ್‌ ನಟ ಯಶ್(Rocking star Yash) ಅವರು ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರೊಡನೆ ಭೋಜನಕೂಟದಲ್ಲಿ ಭಾಗಿಯಾದ ಸಮಯದಲ್ಲಿ ಅವರ ಮಾತುಗಳನ್ನು (Yash remembered Modi conversation) ನೆನೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಇತ್ತೀಚಿನ ಸಂವಾದದ ಕುರಿತು ಮಾತನಾಡಿದ ನಟ ಯಶ್‌ ಅವರೊಂದಿಗೆ ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು ಕೂಡ ಭಾಗಿಯಾಗಿದ್ದರು!

ಬೆಂಗಳೂರು(Bengaluru) ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಕಿಂಗ್‌ ಸ್ಟಾರ್‌ ನಟ ಯಶ್‌,

ಕಾಂತಾರ ನಟ ರಿಷಬ್ ಶೆಟ್ಟಿ(Rishab Shetty), ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್(Ashwini Punith Rajkumar) ಮತ್ತು ಶ್ರದ್ಧಾ ಜೈನ್(Shraddha Jain) ಸೇರಿದಂತೆ ಪ್ರಮುಖ ಕಲಾವಿದರು ರಾಜಭವನದಲ್ಲಿ ರಾತ್ರಿಯ ಭೋಜನಕ್ಕೆ ಪ್ರಧಾನಿ ಅವರೊಂದಿಗೆ ಸೇರಿಕೊಂಡರು.

ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚು ಚರ್ಚೆ ನಡೆಸಿದ್ದು, ಕನ್ನಡ ಚಿತ್ರೋದ್ಯಮವನ್ನು ‘ಸಾಫ್ಟ್ ಪವರ್’(Soft Power) ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.

ಯಶ್ ಅವರು ಪ್ರಧಾನಿ ಮೋದಿ ಅವರೊಂದಿಗಿನ ಹಲವಾರು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ(Social Media) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭೋಜನಕೂಟದ ಸಂವಾದದ ವೇಳೆ ಪ್ರಧಾನಿಯವರು ದಿವಂಗತ ನಟ ಪುನೀತ್ ರಾಜ್‌ಕುಮಾರ್(Punith Rajkumar) ಅವರನ್ನೂ ನೆನಪಿಸಿಕೊಂಡರು ಎಂಬುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: https://vijayatimes.com/compared-soldiers-to-carrots/

ಈ ಅನುಭವದ ಬಗ್ಗೆ ತಮ್ಮ ಅನಿಸಿಕೆಯನ್ನು ಸುದ್ದಿ ಸಂಸ್ಥೆ ANI ಜೊತೆಗೆ ಹಂಚಿಕೊಂಡ ನಟ ಯಶ್, ನಾನು ತುಂಬಾ ಖುಷಿಯಾಗಿದ್ದೆ.

ಪ್ರಧಾನಿ ನರೇಂದ್ರ ಪಿಎಂ ಮೋದಿ ಅವರು ನಮ್ಮ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು ಮತ್ತು ಚಿತ್ರರಂಗದ ಬಗ್ಗೆ ಅವರ ದೂರದೃಷ್ಟಿಯ (Yash remembered Modi conversation) ಬಗ್ಗೆ ಮಾತನಾಡಿದರು.

ನಮ್ಮ ನಿರೀಕ್ಷೆಗಳು, ನಾವು ಏನನ್ನು ನೋಡುತ್ತಿದ್ದೇವೆ, ಸರ್ಕಾರದಿಂದ ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ, ದೇಶಕ್ಕೆ ಉದ್ಯಮವಾಗಿ ನಾವು ಏನು ಮಾಡಬಹುದು ಎಂದು ಅವರು ನಮ್ಮನ್ನು ಕೇಳಿದರು.

ಉದ್ಯಮದ ಸೂಕ್ಷ್ಮ ವಿವರಗಳು ಮತ್ತು ನಾವು ಏನು ಮಾಡಬಹುದು ಎಂಬ ಅವರ ಅಪಾರ ಜ್ಞಾನದಿಂದ ನಾನು ಪ್ರಭಾವಿತನಾಗಿದ್ದೇನೆ.

ಅವರು ಉದ್ಯಮದ ಬಗ್ಗೆ ದೊಡ್ಡ ದೃಷ್ಟಿಕೋನವನ್ನು ಹೊಂದಿದ್ದಾರೆ, ಅವರು ನಮ್ಮ ಕೆಲಸವನ್ನು ಶ್ಲಾಘಿಸಿದರು. ಅದೊಂದು ಅದ್ಭುತ ಅನುಭವ.

ಎಂದಿನಂತೆ ನಮ್ಮ ಪ್ರಧಾನಿಯವರು ತುಂಬಾ ಸ್ಪೂರ್ತಿದಾಯಕವಾಗಿದ್ದರು ಎಂದು ಹೇಳಿದ್ದಾರೆ. ಇನ್ನು ಈ ಮಧ್ಯೆ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಮಾತನಾಡಿದ್ದು,

ನಾನು ಪ್ರಧಾನಿ ಮೋದಿಯವರನ್ನು ಶ್ರೇಷ್ಠ ನಾಯಕ ಎಂದು ಪರಿಗಣಿಸುತ್ತೇನೆ ಮತ್ತು ಅವರನ್ನು ಭೇಟಿ ಮಾಡಲು ನನಗೆ ತುಂಬಾ ಸಂತೋಷವಾಗಿದೆ.

ಅವರು ಕನ್ನಡ ಚಿತ್ರರಂಗದ ಬಗ್ಗೆ ಕೇಳಿದರು, ಏನು ನಡೆಯುತ್ತಿದೆ ಮತ್ತು ನಿಮಗೆ ಏನು ಬೇಕು ಎಂದು ಇತ್ಯಾದಿಗಳ ಬಗ್ಗೆ ಕೇಳಿದರು ಮತ್ತು ಅವರು ಮುಂದೆ ಏನು ಮಾಡಬಹುದು ಎಂದು ಹೇಳಿದರು. ನಮ್ಮ ಕಾಂತಾರ(Kanthara) ಚಿತ್ರವನ್ನು ಹೊಗಳಿದ್ದು, ನಿಜಕ್ಕೂ ಸಂತಸ ನೀಡಿತು ಎಂದು ರಿಷಬ್ ಹೇಳಿದರು.

Exit mobile version