ಸುಳ್ಯ, ಕಡಬ, ನೆಲ್ಯಾಡಿಯಲ್ಲಿ ಅಂಗಡಿಗಳಲ್ಲಿ, ಪೆಟ್ರೋಲ್ ಪಂಪುಗಳಲ್ಲಿ ಭಾರೀ ಜನಜಂಗುಳಿ ಉಂಟಾಗಿತ್ತು. ಈ ಮಧ್ಯೆ ಕಡಬ ಪಂಚಾಯತ್ ಮಾಡಿದ ಯಡವಟ್ಟಿನಿಂದ ಸಮಸ್ಯೆ ಸೃಷ್ಟಿಯಾಗಿದೆ. ಜಿಲ್ಲಾಡಳಿತದ ಆದೇಶದ ನಡುವೆ ಕಡಬಕ್ಕೆ ಇಲ್ಲಿನ ಪಂಚಾಯತ್ ವಿಶೇಷ ನಿಯಮ ಜಾರಿ ಮಾಡಿದೆ. ಕಡಬ ಪಂಚಾಯತ್ ತೆಗೆದುಕೊಂಡ ನಿರ್ಧಾರಕ್ಕೆ ಬೇರೆ ಗ್ರಾಮದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗಡಿ ಬಂದ್ ಮಾಡಿಸಿದ ಹಿನ್ನಲೆ ದಿನಸಿ ಖರೀದಿಸಲು ಜನರು ಪರದಾಟ ಮಾಡಿದ್ದಾರೆ. ಸ್ಥಳಕ್ಕೆ ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಭೇಟಿ ನೀಡಿ ಜನರ ಬಳಿ ಸಮಸ್ಯೆಗಳನ್ನು ಆಲಿಸಿದ್ದಾರೆ. ತಕ್ಷಣವೇ ಅಂಗಡಿ ತೆರೆಸಿ ಸಹಾಯಕ ಆಯುಕ್ತರು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಖುದ್ದು ಅಂಗಡಿಗಳಿಗೆ ತೆರಳಿದ ಎ.ಸಿ ಜನ ಸಾಮಾನ್ಯರಿಗೆ ಮಾಹಿತಿ ನೀಡಿದ್ದಾರೆ. ನಾಳೆಯಿಂದ ಯಾವುದೇ ತೊಂದರೆಗಳು ಉಂಟಾಗದಂತೆ ಜನರಿಗೆ ಆಹಾರ ಸಾಮಾಗ್ರಿಗಳು ತಲುಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಡಬ ಪಂಚಾಯತ್ನಿಂದ ಯಡವಟ್ಟು : ಜನರ ಸಮಸ್ಯೆಗೆ ಸಹಾಯಕ ಆಯುಕ್ತರ ಸ್ಪಂದನೆ
-
By Kiran K
- Categories: ಪ್ರಮುಖ ಸುದ್ದಿ, ರಾಜ್ಯ
Related Content
ಲೋಕಸಭೆಗೆ ಸ್ಪರ್ಧಿಸದಿರಲು ಕಾರಣ ತಿಳಿಸಿದ ಪ್ರಿಯಾಂಕಾ ವಾದ್ರಾ!
By
Bhavya
May 18, 2024
ನಿಮ್ಮ ಮೋದಿಗೆ ಕನ್ನಡ ಬರುತ್ತಾ ಮೊದಲು ತಿಳ್ಕೊಂಡು ಮಾತಾಡಿ ಎಂದ ಮಧು ಬಂಗಾರಪ್ಪ
By
Bhavya
May 18, 2024
ದೇವರಾಜೇಗೌಡ ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು: ಡಿಕೆ ಶಿವಕುಮಾರ್ ಕಿಡಿ
By
Bhavya
May 18, 2024
100ಕೋಟಿ ಆಫರ್ ಆರೋಪವನ್ನು ದೇವರಾಜೇಗೌಡ ಸಾಬೀತು ಮಾಡಿದರೆ ಕ್ಷಮೆಯಾಚಿಸುತ್ತೇನೆ: ಚೆಲುವರಾಯಸ್ವಾಮಿ ಸವಾಲು
By
Bhavya
May 18, 2024