ಬೆಂಗಳೂರು, ಅ.13: ಸೂಕ್ತವಾಗಿ ಕಸವಿಂಗಡಣೆಯನ್ನು ಮಾಡದ ಹೆಸರಾಂತ ನಾಲ್ಕು ಪ್ರಮುಖ ಹೊಟೆಲ್ ಮತ್ತು ರೆಸ್ಟೊರೆಂಟ್ಗಳಿಗೆ ಬಿಬಿಎಂಪಿ 40 ಸಾವಿರ ರೂಪಾಯಿ ದಂಡ ವಿಧಿಸಿದೆ.
ಬಿಬಿಎಂಪಿಯ ತಾಜ್ಯ ನಿರ್ವಹಣಾ ವಿಶೇಷ ಘಟಕದ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದ್ದು. ಕೊರಮಂಗಲದ ಪೋರಂ ಮಾಲ್ನಲ್ಲಿರುವ ಹೋಟೆಲ್ಗಳಿಂದ ನಿಗದಿತ ದಂಡ ವಸೂಲಿ ಮಾಡಲಾಗಿದೆ.
ಶಿವಸಾಗರ್ ರೆಸ್ಟೋರೆಂಟ್, ಕೆ.ಎಫ್ಸಿ ಸೇರಿದಂತೆ ಪ್ರತಿಷ್ಠಿತ ರೆಸ್ಟೊರೆಂಟ್ಗಳ ಮೇಲೆ ದಿಡೀರ್ ದಾಳಿ ನಡೆಸಿದ ಬಿಬಿಎಂಪಿ ಅಕಾರಿಗಳು ತಲಾ ರೂ. 10,167 ದಂಡ ವಿಧಿಸಿದ್ದು, ಸ್ಥಳದಲ್ಲೆ ವಸೂಲಿ ಮಾಡಿದ್ದಾರೆ.
ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಬೇಕೆನ್ನುವುದು ಸಾರ್ವಕಾಲಿಕ ನಿಯಮ. ಆದರೆ ಇಲ್ಲಿ ಸರಿಯಾಗಿ ತಾಜ್ಯ ವಿಂಗಡಣೆ ಮಾಡದೆ ಬಿಬಿಎಂಪಿಗೆ ನೀಡಲಾಗುತ್ತಿತ್ತು. ಆದ್ದರಿಂದ ದಂಡ ವಿಧಿಸಲಾಗಿದೆ ಎಂದು ಬಿಬಿಎಪಿ ಅಧಿಕಾರಿಗಳು ತಿಳಿಸಿದ್ದಾರೆ.