ಆರ್.ಆರ್.ನಗರ ಉಪ ಸಮರ: ನಟ ದರ್ಶನ್ ಅವರಿಂದ ಮತದಾನ

ಬೆಂಗಳೂರು, ನ. 3: ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಕಾದಾಟಕ್ಕೆ ವೇದಿಕೆಯಾಗಿರುವ ರಾಜರಾಜೇಶ್ವರಿನಗರ ಉಪ ಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದೆ.

ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ಕೂಡ ತಮ್ಮ ಹಕ್ಕು ಚಲಾಯಿಸಿದರು. ಆರ್.ಆರ್. ನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಗೆ ಆಗಮಿಸಿದ ನಟ ದರ್ಶನ್, ಸಾಮಾನ್ಯ ಜನರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಈ ವೇಳೆ ನಟ ದರ್ಶನ್ ಅವರನ್ನು ಕಂಡು ಪುಳಕಿತರಾದ ಚುನಾವಣಾ ಸಿಬ್ಬಂದಿ, ಫೋಟೋಗಾಗಿ ಮಾಸ್ಕ್ ತೆಗೆಯುವಂತೆ ಮಾಡಿದ ಮನವಿಗೆ, ನಟ ದರ್ಶನ್ ನಕ್ಕು ಸುಮ್ಮನಾದರು.

ಇದಕ್ಕೂ ಮುನ್ನ ಇದೇ ಕ್ಷೇತ್ರ ವ್ಯಾಪ್ತಿಯ ನಿವಾಸಿಯಾಗಿರುವ ನಟ ನೆನಪಿರಲಿ ಪ್ರೇಮ್ ಪತ್ನಿ ಸಮೇತರಾಗಿ ಮತದಾನ ಮಾಡಿದರು.

Exit mobile version