ಕೃಷಿ ಮಸೂದೆ ಅಂಗೀಕಾರ ಹಿನ್ನೆಲೆ: ವಿಪಕ್ಷ ನಾಯಕರಿಂದ ಇಂದು ಸಂಜೆ ರಾಷ್ಟ್ರಪತಿಗಳ ಭೇಟಿ

ರಾಜ್ಯ ಸಭೆಯಲ್ಲಿ ಅಂಗೀಕಾರಗೊಂಡಿರುವ ಕೃಷಿ ಮಸೂದೆ ಮಂಡನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷದ ನಾಯಕರು, ಇಂದು ರಾಷ್ಟ್ರಪತಿಗಳನ್ನು ಭೇಟಿಯಾಗಲು ತೀರ್ಮಾನಿಸಲಿದ್ದಾರೆ.

ಸಂಸತ್ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ ಕಾರಣದಿಂದ ಒಂದು ವಾರಗಳ ಕಾಲ ಕಲಾಪದಿಂದ ಅಮಾನತುಗೊಂಡಿರುವ 8 ಸಂಸದರು ತಮ್ಮ ಅಮಾನತನ್ನು ವಿರೋಧಿಸಿ ಸಂಸತ್ ಭವನದ ಬಳಿ ಆಹೋರಾತ್ರಿ ಧರಣಿ ನಡೆಸಿದ್ದರು.

ಈ ನಡುವೆ ಕೃಷಿ ಮಸೂದೆ ಮಂಡನೆ ವಿಷಯ ಕುರಿತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ನೇತೃತ್ವದಲ್ಲಿ ಸಂಜೆ 5 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ.

Exit mobile version