ಬಳ್ಳಾರಿ: ಕೆಲ ದಿನಗಳಿಂದ ಬಳ್ಳಾರಿಯಲ್ಲಿ ಭಾರೀ ಮಳೆಯಾಗುತ್ತಿದ್ದುದರಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಸೇತುವೆ ಕುಸಿದಿದೆ. ಈ ಘಟನೆಯಿಂದ ಈ ಮಾರ್ಗದ ಸಂಚಾರದಲ್ಲಿ ಅಸ್ತವ್ಯಸ್ಥವಾಗಿದೆ. ಹಡಗಲಿ ಮತ್ತು ಗದಗವನ್ನು ಸಂಪರ್ಕಿಸುವ ರಸ್ತೆ ಇದಾಗಿದೆ.
ಈ ರಸ್ತೆ ನಿರ್ಮಾಣವಾಗಿ ಕೇವಲ 18 ವರ್ಷಗಳಷ್ಟೇ ಆಗಿದೆ.2002 ರಲ್ಲಿ ನಿರ್ಮಾಣಗೊಂಡ ಈ ಸೇತುವೆ ಈಗಾಗಲೇ ಶೀಥಿಲಾವಸ್ಥೆಯಲ್ಲಿದ್ದರೂ ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದ ಲೋಕೋಪಯೋಗಿ ಇಲಾಖೆ ಅನೇಕ ಸರಿ ದೂರು ನೀಡಿದ್ದರೂ ಇದರತ್ತ ಗಮನ ಹರಿಸಿಲ್ಲವೆಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.
ಸೇತುವೆ ಕುಸಿತದ ವೇಳೆ ರಸ್ತೆ ಮೇಲೆ ಪ್ರಯಾಣಿಸುತ್ತಿದ್ದ ಲಾರಿ ಹಾಗೂ ಕಾರು ಜಖಂಗೊಂಡಿದೆ. ನಸುಕಿನ ವೇಳೆ ಹೀಗಾದುದರಿಂದ ಜನಸಂಚಾರವಿರಲಿಲ್ಲ. ಈ ಬಗ್ಗೆ ಸಾರ್ಜನಿಕರು ತೀರ್ವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುಣ್ಯಕ್ಕೆ ಸೇತುವೆ ನಸುಕಿನ ವೇಳೆ ಜನಸಂಚಾರ ಇಲ್ಲದಾಗ ಕುಸಿದಿದೆ. ಜನಸಂಚಾರ ಹೆಚ್ಚಿರುವ ಸಂದರ್ಭದಲ್ಲಿ ಹೀಗಾಗುತ್ತಿದ್ದರೆ ಗತಿಯೇನು? ಇದಕ್ಕೆ ಯಾರು ಹೊಣೆ ಆಗುತ್ತಿದ್ದರು ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.