ನೇಕಾರ- ರೈತರಿಗೆ ನಗದು ಜಮೆ ಮಾಡಲು ಚಾಲನೆ –ಸಿ ಎಂ ಯಡಿಯೂರಪ್ಪ

ಕೋವಿಡ್-೧೯  ಹಿನ್ನಲೆ ಜನರಿಗೆ ಕೆಲಸಗಳಿಲ್ಲದೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ಈ ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ  ಸರ್ಕಾರ  ಕೆಲವೊಂದು ಸೆಕ್ಟರ್ ಗಳಿಗೆ ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರೋ ವಿವಿಧ ವರ್ಗಗಳಿಗೆ   ಪ್ಯಾಕೇಜನ್ನು ಘೋಷಣೆ ಮಾಡಿತ್ತು. ಇದೀಗ ಇದರ ಬಗ್ಗೆ ಮುಖ್ಯಮಂತ್ರಿ  ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

  ನೇಕಾರ  ಹಾಗೂ  ರೈತ ಸರ್ಕಾರದ ಎರಡು ಕಣ್ಣುಗಳಿದ್ದಂತೆ  ಅದಕ್ಕಾಗಿ ಅವರಿಗೆ ಈಗಾಗಲೇ ವಿಶೇಷವಾದ ಪರಿಹಾರವನ್ನು ಘೋಷಣೆ ಮಾಡಲಾಗಿತ್ತು . ಅದರಂತೆ  ಸೋಮವಾರ ನೇಕಾರರ ಅಕೌಂಟ್ ಗೆ ನೇರವಾಗಿ  ನಗದು ಜಮೆ ಮಾಡೋದಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

 ಇದೇ ಸಂದರ್ಭದಲ್ಲಿ ಸಿ ಎಂ ಯಡಿಯೂರಪ್ಪ ಜನರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ . ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ತಿದೆ.  ಸಾರ್ವಜನಿಕರು ಕೂಡ  ಸರ್ಕಾರದ ಜೊತೆ ಕೈ ಜೋಡಿಸಬೇಕು  ಎಂದು ಮನವಿ ಮಾಡಿಕೊಂಡಿದ್ದಾರೆ.

Exit mobile version