ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ರವರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ

ನಟ ಪುನೀತ್‌ ರಾಜ್‌ಕುಮಾರ್‌ರವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ.ಅಕ್ಟೊಬರ್‌ 29ರಂದು ಹೃದಯಾಘಾತದಿಂದ ನಿಧನರಾದರು.

ಪುನೀತ್‌ ರಾಜ್‌ಕುಮಾರ್‌ರವರು ಚಿತ್ರರಂಗದ ಜೊತೆಗೆ ನಾಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಅವರಿಗೆ ಮುರುಘಾ ಮಠದ ಪೀಠಾಧಿಪತಿ ಡಾ ಶಿವಮೂರ್ತಿ ಮುರುಘಾ ಶರಣರು 2020-21ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಪ್ರಶಸ್ತಿಯನ್ನು ಮುಂಬರುವ ಬಸವ ಜಯಂತಿಯಂದು ಶ್ರೀಮತಿ ಅಶ್ವಿನಿ  ಪುನೀತ್‌ ರಾಜ್‌ಕುಮಾರ್‌ ಇವರಿಗೆ ನೀಡುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ನೀಡುವ ಅತೀ ಉನ್ನತ  ಪ್ರಶಸ್ತಿಗಳಲ್ಲಿಈ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ ಕೂಡ ಒಂದಾಗಿದೆ .ಇದು 5 ಲಕ್ಷ ನಗದು, ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ.

ನಟ ಪುನೀತ್‌ ರಾಜ್‌ಕುಮಾರ್‌ರವರು ನಮ್ಮೆಲ್ಲರನ್ನು ಅಗಲಿ 6 ದಿನಗಳಾದರೂ ಇನ್ನೂ ಆ ಅಗಲಿಕೆ ನಂಬಲು ಅಸಾಧ್ಯವಾಗಿದೆ.

 

Exit mobile version