ಪ್ರತಿಪ್ರಜೆಗೂ ರಾಮದರ್ಶನ; ಯೋಗಿ ಭರವಸೆ

ಚಿತ್ರಕೂಟ, ಅ. 31: ರಾಜ್ಯದಲ್ಲಿ ತೀವ್ರವಾಗಿ ಕೊರೋನಾ ಸಾಂಕ್ರಾಮಿಕ ರೋಗ  ಹರಡುತ್ತಿದ್ದು ಇದು ಅಂತ್ಯಗೊಂಡ ಬಳಿಕ   ರಾಜ್ಯದ ಪ್ರತಿ ಹಳ್ಳಿಯ ಎಲ್ಲಾ ವ್ಯಕ್ತಿಗೂ ಭಗವಾನ್ ರಾಮನ “ದರ್ಶನ” ಕ್ಕೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದು  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ.

ಈಗಾಗಲೆ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣದ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಚಿತ್ರಕೂಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲರಿಗೂ ರಾಮದರ್ಶನದ ವ್ಯವಸ್ಥೆ ಮಾಡುವ ಭರವಸೆಯನ್ನು  ನೀಡಿದ್ದಾರೆ.

Exit mobile version