ಮಧ್ಯಪ್ರದೇಶದಲ್ಲಿ ಆರ್ಭಟಿಸಿದ ಮಳೆ ; ೯ ಮಂದಿ ಸಾವು

ಮಳೆಗಾಲ ಆರಂಭವಾಗಿದೆ ದೇಶದ ಹಲವೆಡೆ ಮುಂಗಾರು ಮಳೆಯ ಅಬ್ಬರ ಜೋರಾಗೆ ಇದೆ. ಇನ್ನೊಂದೆಡೆ ಮಳೆಯ ಅವಾಂತರಕ್ಕೆ ಹಲವು ನಷ್ಟಗಳು ಸಂಭವಿಸಿದೆ.

ಮಧ್ಯಪ್ರದೇಶದ ಹಲವೆಡೆ ನಿನ್ನೆ ಸುರಿದ ಭಾರಿ ಗಾಳಿ ಮಳೆ ಹಾಗೂ  ಸಿಡಿಲಿಗೆ ಸುಮಾರು 9 ಮಂದಿ ಸಾವನ್ನಪ್ಪಿದ್ದಾರೆ. ,  ಜೊತೆಗೆ  ಹಲವು ಮನೆಗಳು ಧರೆಗುರುಳಿರೋ ಬಗ್ಗೆ ವರದಿಯಾಗಿದೆ.

ಅಂದಹಾಗೆ   ಮಧ್ಯಪ್ರದೇಶದ ಅನುಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಐವರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ಡಿಯೋರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೌಹರಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ನಿಂತಿದ್ದ ಮೂವರಿಗೆ ಸಿಡಿಲು ಬಡಿದಿದ್ದು  ; ಸ್ಥಳದಲ್ಲೇ ಶ್ಯಾಮಾ ಬಾಯಿ ಮತ್ತು ಕೃಷ್ಣಪಾಲ್ ಸಿಂಗ್ ಎಂಬವರು ಸಾವನ್ನಪ್ಪಿದ್ದಾರೆ.  ಇನ್ನು ಇದರಿಂದ ಗಾಯಗೊಂಡ ಪುಷ್ಪಲತಾ ದೇವಿ ಎಂಬಾಕೆಯನ್ನು ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.ಹವಮಾನ ಇಲಾಖೆ ಇನ್ನು ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಹೊರಹಾಕಿದ್ದು ;ಮೂರು ನಾಲ್ಕು ದಿವಸ ಮಳೆ ಮುಂದುವರೆಯುವ ಸಾಧ್ಯತೆಯಿದೆ.

Exit mobile version