ಮಳೆಯ ಆರ್ಭಟಕ್ಕೆ ಚೆನ್ನೈ ಜಲಾವೃತ

ಚೆನ್ನೈ, ಅ. 29: ಕರ್ನಾಟಕದಲ್ಲಿ ಮಳೆಯ ಆರ್ಭಟ ಕಡಿಮೆಯಾದರೂ ನೆರೆಯ ರಾಜ್ಯ ಚೆನ್ನೈನಲ್ಲಿ ಇಂದು ಮುಂಜಾನೆ ೩ ಗಂಟೆಯಿಂದ ಗುಡುಗು ಸಮೇತ ಭಾರೀ ಮಳೆಯಾಗುತ್ತಿದ್ದು, ಅನೇಕ ರಸ್ತೆಗಳು ಜಲಾವೃತವಾಗಿದೆ.

ಇದರಿಂದಾಗಿ ಚೆನ್ನೈನ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ಬೆಳಿಗ್ಗೆ 7: 15 ರವರೆಗೆ 11 ಸೆಂಟಿಮೀಟರ್ ಮಳೆಯಾಗಿದೆ ಎಂದು ವರದಿಗಳು ತಿಳಿಸಿವೆ. ಬೆಳಿಗ್ಗೆ 11 ಗಂಟೆಯವರೆಗೆ ಮಳೆ ಮುಂದುವರಿಯಲಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು ಮತ್ತು ಕೇರಳ ಸೇರಿದಂತೆ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಈಶಾನ್ಯ ಮಾನ್ಸೂನ್ ಪ್ರಾರಂಭವಾಗಿದೆ ಎಂದು ಹೇಳಿದ್ದು, ಜನಪ್ರಿಯ ತಮಿಳುನಾಡು ಹವಾಮಾನ ತಜ್ಞ ಪ್ರದೀಪ್ ಜಾನ್, ‘ಚೆನ್ನೈ ನಗರವು ಕೆಲವೇ ಗಂಟೆಗಳಲ್ಲಿ ಕನಿಷ್ಠ 150 ಮಿಲಿಮೀಟರ್ ನಿಂದ 200 ಮಿಲಿಮೀಟರ್ ಮಳೆಯಾಗಿದೆ. ನಗರವು ಸ್ವಲ್ಪ ಸಮಯದವರೆಗೆ ನೀರಿನ ನಿಶ್ಚಲತೆಯನ್ನು ಕಾಣುವ ಸಾಧ್ಯತೆಯಿದೆ. ಅಂತಹ ಹೆಚ್ಚಿನ ತೀವ್ರತೆಯ ಮಳೆಯನ್ನು ಯಾವುದೇ ನಗರವು ನಿಭಾಯಿಸುವುದಿಲ್ಲ. ‘ ಎಂದು ಹೇಳಿದೆ.

ಮಳೆಯ ಆರ್ಭಟದಿಂದಾಗಿ ಚೆನ್ನೈನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. 

Exit mobile version