ಮಳೆಯ ಆರ್ಭಟ: ಬಾಗಲಕೋಟೆಯಲ್ಲಿ 2576 ಮನೆಗಳಿಗೆ ಹಾನಿ

ಬಾಗಲಕೋಟೆ, ಅ.15: ರಾಜ್ಯದಲ್ಲಿ ಹಲವೆಡೆ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಬಾಗಲಕೋಟೆಯೂ ಹೊರತಾಗಿಲ್ಲ. ಎಡೆಬಿಡದೆ ಸುರಿದ ಮಳೆಯಿಂದಾಗಿ ಒಟ್ಟು 2576 ಮನೆಗಳು, 3 ಜಾನುವಾರು ಹಾಗೂ ಓರ್ವ ವ್ಯಕ್ತಿಯ ಜೀವ ಹಾನಿಯಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬಾಗಲಕೋಟೆ ತಾಲೂಕಿನಲ್ಲಿ 241, ಬಾದಾಮಿ 370, ಗುಳೇದಗುಡ್ಡ 121, ಹುನಗುಂದ 120, ಇಲಕಲ್ಲ 113, ಜಮಖಂಡಿ 271, ರಬಕವಿ-ಬನಹಟ್ಟಿ 289, ಮುಧೋಳ 640, ಬೀಳಗಿ 140 ಸೇರಿ ಒಟ್ಟು 2576 ಮನೆಗಳು ಹಾನಿಗೊಳಗಾಗಿವೆ. 3 ಜಾನುವಾರು ಮತ್ತು ಓರ್ವ ವ್ಯಕ್ತಿಯ ಜೀವಹಾನಿಯಾಗಿದ್ದು ಕಂಡುಬಂದಿದೆ. ಜತೆಗೆ ಜಿಲ್ಲೆಯಲ್ಲಿ ಸತತ ಮಳೆ ಸುರಿದ ಪರಿಣಾಮ ಹಲವಾರು ಮನೆಗಳು ಕುಸಿದು ಬೀಳುತ್ತಿದೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Exit mobile version