ಬೆಂಗಳೂರು, ಅ. 17: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಖೈದಿಯಾಗಿ ಸೆರೆಮನೆ ವಾಸಿಯಾಗಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರು ಅಕ್ಟೋಬರ್ 23ಕ್ಕೆ ವಿಚಾರಣೆ ಮುಂದೂಡಿದ್ದಾರೆ.
ನಟಿ ರಾಗಿಣಿಗೆ ಜಾಮೀನು ನೀಡುವಂತೆ ರಾಗಿಣಿ ಪರ ವಾದ ಮಂಡಿಸಿದ ವಕೀಲ ಮಹಮ್ಮದ್ ತಾಕೀರ್ ಕೋರಿದ್ದರು. ಆದರೆ ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿರುವುದರಿಂದ ನಟಿ ರಾಗಿಣಿ ಮುಂದಿನ ವಾರದವರೆಗೂ ಪರಪ್ಪನ ಆಗ್ರಹಾರದಲ್ಲಿ ಬಂಧಿಯಾಗಿರಬೇಕಾಗಿದೆ.