ವಿಧಾನ ಪರಿಷತ್ ನ 4 ಕ್ಷೇತ್ರಗಳಿಗೆ ಅ .28ರಂದು ಚುನಾವಣೆ:

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 28ರಂದು ಈ ಚುನಾವಣೆ ನಡೆಯಲಿದೆ. ವಿಧಾನ ಪರಿಷತ್ ನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ.

ಆಗ್ನೇಯ ಪದವೀಧರರ ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ, ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.  ಕಳೆದ ಜೂನ್ 30 ಕ್ಕೆ ಚೌದ ರೆಡ್ಡಿ, ತೂಪಲ್ಲಿ, ಎಸ್ ವಿ ಸಂಕನೂರ, ಶರಣಪ್ಪ ಮಟ್ಟೂರು ಹಾಗೂ ಪುಟ್ಟಣ್ಣ ಅವರ ಅವಧಿ ಕೊನೆಯಾಗಿತ್ತು. ಈ ಸ್ಥಾನಗಳಿಗೆ ಅಕ್ಟೋಬರ್ 28 ರಂದು ಚುನಾವಣೆ ನಡೆಯಲಿದೆ.

ಅ 1 ರಂದು ನಾಮಪತ್ರ ಸಲ್ಲಿಕೆಗೆ ಪ್ರಾರಂಭವಾಗಲಿದ್ದು ಅ. 8 ಕ್ಕೆ ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅ 9 ಕ್ಕೆ ನಾಮಪತ್ರ ಪರಿಶೀಲನೆ ಹಾಗೂ ನಾಮ ಪತ್ರ ಹಿಂದಕ್ಕೆ ಪಡೆಯಲು ಅ 12 ಕೊನೆಯ ದಿನವಾಗಿದೆ. ನವೆಂಬರ್  2 ರಂದು ಪಲಿತಾಂಶ ಪ್ರಕಟವಾಗಲಿದೆ.

Exit mobile version