ಸುದೀಪ್‌ in ಅಶ್ವತ್ಥಾಮ

“ಫ್ಯಾಂಟಮ್” ಚಿತ್ರದ ಮೂಲಕ ಸಿನಿ ರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿರುವ ಕಿಚ್ಚ ಸುದೀಪ್ ಹಾಗೂ ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಜೋಡಿ, ಬಹು ನಿರೀಕ್ಷಿತ ಫ್ಯಾಂಟಮ್ ಚಿತ್ರ ಬಿಡುಗಡೆಗೂ ಮುನ್ನ ಮತ್ತೊಂದು ಚಿತ್ರ ಮಾಡಲು ಸಜ್ಜಾಗಿದ್ದಾರೆ.

ಅನೂಪ್ ನಿರ್ದೇಶನಕ್ಕೆ ಮತ್ತೊಂದು ಅವಕಾಶ ಕೊಟ್ಟಿರುವ ಕಿಚ್ಚ ಸುದೀಪ್, ತಮ್ಮ ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಲ್ಲಿ ತಯಾರಾಗಲಿರುವ ಮುಂದಿನ ಚಿತ್ರಕ್ಕೆ ಅನೂಪ್ ಭಂಡಾರಿಯನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಕುರಿತು ಅಧಿಕೃತವಾಗಿ ಘೋಷಣೆಯಾಗಿದ್ದು, ಈ ಸಿನಿಮಾದ ಶೀರ್ಷಿಕೆ ಸಹ ಬಹಿರಂಗವಾಗಿದೆ.

ಸುದೀಪ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ಚಿತ್ರಕ್ಕೆ ‘ಅಶ್ವತ್ಥಾಮ’ ಎಂದು ಹೆಸರಿಡಲಾಗಿದ್ದು, ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಆದರೆ ಇದು ಮಹಾಭಾರತದ ಅಶ್ವತ್ಥಾಮನ ಕುರಿತು ಕಥೆಯೋ ಅಥವಾ ಅಶ್ವತ್ಥಾಮನ ವ್ಯಕ್ತಿತ್ವವುಳ್ಳ ವ್ಯಕ್ತಿಯ ಕಥೆಯೋ ಎಂಬ ಕುತೂಹಲ ಇದೀಗ ಗಾಂಧಿ ನಗರದಲ್ಲಿ ಕಾಡುತ್ತಿದೆ. ಪೋಸ್ಟರ್‌ನಲ್ಲಿ ಬಿಲ್ಲು ಹಿಡಿದಿರುವ ಅಶ್ವತ್ಥಾಮನೂ ಇದ್ದಾನೆ, ಗನ್ ಹಿಡಿದಿರುವ ವ್ಯಕ್ತಿನೂ ಇದ್ದಾನೆ. ಆದರೆ, ಸುದೀಪ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕ ಯಾರು ಎಂದು ಇನ್ನು ಅಂತಿಮವಾಗಿಲ್ಲ.

Exit mobile version