ಬೆಂಗಳೂರು, ಅ. 14: ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮುನಿರಾಜು, ”ನನಗೆ ನನ್ನ ಮನೆಗೆ ಬಂದಷ್ಟು ಖುಷಿಯಾಗುತ್ತಿದೆ”. ಇಂದು ಕಾಣುತ್ತಿರುವ ಒಗ್ಗಟ್ಟು ನನಗೆ ಹಿಂದಿನ ಚುನಾವಣೆಗಳಲ್ಲಿ ಕಾಣಿಸಿರಲಿಲ್ಲ. ಈ ಚುನಾವಣೆ ಅಭಿವೃದ್ದಿಪರವಾದ ಚುನಾವಣೆಯಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ನಮ್ಮದೇ ಪಕ್ಷವಿದೆ. ಅಭಿವೃದ್ದಿ ಕೆಲಸಗಳನ್ನು ಮಾಡುವವರು ಯಾರು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಜನ ನನ್ನ ಕೈ ಬಿಡೋದಿಲ್ಲ ಎಂದು ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಹೇಳಿಕೆ ನೀಡಿದ್ದಾರೆ.
ನಾನು ಪಕ್ಷ ತೊರೆದಾಗ ಎಲ್ಲ ಕಾರ್ಪೋರೇಟರ್ಗಳು ನನ್ನೊಂದಿಗೆ ಗಟ್ಟಿಯಾಗಿ ಹಾಗೂ ಬೆಂಬಲಿಗರಾಗಿ ನಿಂತಿದ್ದರು. ಅವರ ಮೇಲೆ ಅಭಿಮಾನ ಇರುವುದು ಸಹಜ. ಆದರೆ ಈ ಪಕ್ಷ ಒಂದು ಮನೆ ಇದ್ದಂತೆ. ಕೂತು ಮಾತನಾಡೋಣ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಗೆ ಹರಿಸಿಕೊಳ್ಳೋಣ ಎಂದರು.
ಕುಮಾರಸ್ವಾಮಿ ಹಾಗು ನನ್ನ ನಡುವೆ ಚಿತ್ರ ರಂಗದ ನಂಟು ಸ್ನೇಹ ಇದೆ. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ನನಗೆ ಬಾಲ್ಯ ಸ್ನೇಹಿತರು 22ನೇ ವಯಸ್ಸಿನಿಂದಲೂ ನನಗೆ ಡಿ.ಕೆ. ಶಿವಕುಮಾರ್ ಸ್ನೇಹಿತರಾಗಿದ್ದಾರೆ. ಸ್ನೇಹ ವ್ಯವಹಾರಗಳೇ ಬೇರೆ, ಚುನಾವಣೆಯೇ ಬೇರೆ. ಜ್ಯೋತಿಷಿಗಳ ಮಾತು ಕೇಳಿ ಹೆಣ್ಣು ಮಗಳನ್ನು ನನ್ನ ವಿರುದ್ದ ನಿಲ್ಲಿಸಿದ್ದಾರೆ. ಕುಸುಮಾ ಅವರಿಗೆ ಇದು ಮೊದಲ ಚುನಾವಣೆ ರಾಜಕೀಯದ ಅನುಭವ ಇಲ್ಲ. ನನಗೂ ನನ್ನ ಜ್ಯೋತಿಷಿಗಳು ಹೇಳಿದ್ದಾರೆ, ನೀನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೀಯಾ ಎಂದು ಭವಿಷ್ಯ ನುಡಿದಿದ್ದಾರೆ, ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದರು.