ಧಾನ್ಯ ಸಂಗ್ರಹಿಸುವ ಕಂಟೈನರ್ ನೊಳಗೆ ಸಿಲುಕಿ 5 ಮಕ್ಕಳು ಸಾವು

ರಾಜಸ್ತಾನ, ಮಾ. 22: ರಾಜಸ್ಥಾನದ ಬಿಕಾನೇರ್​ನ ಹಿಮ್ಮತಸರ್ ಗ್ರಾಮದಲ್ಲಿ ಧಾನ್ಯ ಸಂಗ್ರಹಿಸುವ ಕಂಟೇನರ್​ನೊಳಗೆ ಸಿಲುಕಿದ 5 ಮಕ್ಕಳು ಉಸಿರುಗಟ್ಟಿ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ಭಾನುವಾರ ಆಟವಾಡುತ್ತಿದ್ದ ಮಕ್ಕಳು ಕಂಟೇನರ್​ನೊಳಗೆ ನುಗ್ಗಿದ್ದು, ಅದರ ಬಾಗಿಲು ಮುಚ್ಚಿಕೊಂಡಿತ್ತು. ಮಕ್ಕಳಿಗೆ ಬಾಗಿಲು ತೆಗೆಯಲು ಸಾಧ್ಯವಾಗದೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸೇವಾರಾಮ್ (4), ರವೀನಾ (7) , ರಾಧಾ (5), ಪೂನಂ(8) ಮತ್ತು ಮಾಲಿ ಎಂಬ ೫ ಮಕ್ಕಳು ಕಂಟೇನರ್ ನೊಳಗೆ ಸಿಲುಕಿದ್ದ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಪ್ರೀತಿ ಚಂದ್ರ ಹೇಳಿದ್ದಾರೆ. ಈ ಮಕ್ಕಳ ಅಮ್ಮ ಮನೆಗೆ ಬಂದಾಗ ಮಕ್ಕಳು ಅಲ್ಲಿರಲಿಲ್ಲ. ಮಕ್ಕಳಿಗಾಗಿ ಹುಡುಕಾಟ ನಡೆಸಿ ಕಂಟೇನರ್ ಬಾಗಿಲು ತೆರೆದಾಗ ಅದರೊಳಗೆ ಮಕ್ಕಳು ಪತ್ತೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮಕ್ಕಳ ಸಾವಿಗೆ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಸಂತಾಪ ಸೂಚಿಸಿದ್ದಾರೆ. ಈ ಸಾವು ಹೃದಯ ವಿದ್ರಾವಕ. ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Exit mobile version