Davanagere: ತುರ್ತು ವೇಳೆ ಸಮಯದಲ್ಲಿ ಜೀವರಕ್ಷಕವಾಗಿ ಕಾರ್ಯ ನಿರ್ವಹಿಸುವ 108 ಆಂಬ್ಯುಲೆನ್ಸ್ (108 Ambulances prblm – Garage) ವಾಹನಗಳೇ ರೋಗ ಪೀಡಿತವಾಗಿ
ಗ್ಯಾರೇಜ್ ಸೇರಿದ್ದು, ಸರಿಯಾದ ಸಮಯಕ್ಕೆ ಸೇವೆ ಸಿಗದಂತಾಗಿದೆ. ರಾಜ್ಯದಲ್ಲಿ ಜನರು ಅನಿವಾರ್ಯವಾಗಿ ದುಬಾರಿ ಹಣ ಕೊಟ್ಟು ಖಾಸಗಿ ಆಂಬ್ಯುಲೆನ್ಸ್ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ತುರ್ತು ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳನ್ನು ಅಂದರೆ ರಸ್ತೆ ಅಪಘಾತ, ಹೃದಯಾಘಾತ ಸೇರಿದಂತೆ ನಾನಾ ಕಾರಣಗಳಿಂದ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ರಾಜ್ಯ ಸರಕಾರ
ಆರೋಗ್ಯ ಕವಚ ಯೋಜನೆಯಡಿ 108 ಅಂಬ್ಯುಲೆನ್ಸ್ ಸೇವೆ ಆರಂಭಿಸಿ, 711 ಅಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಿತ್ತು. ಆದರೆ, ಈ ಆಂಬ್ಯುಲೆನ್ಸ್ಗಳಲ್ಲಿ ನೂರಾರು ಆಂಬ್ಯುಲೆನ್ಸ್ಗಳು ದುರಸ್ತಿಗೆ
ಬಂದು ಗ್ಯಾರೇಜ್ (108 Ambulances prblm – Garage) ಸೇರಿದೆ.
ಗ್ಯಾರೇಜ್ಗ ಸೇರಿದ 190 ಆಂಬ್ಯುಲೆನ್ಸ್:
ರಾಜ್ಯದಲ್ಲಿ ತುರ್ತು ಸೇವೆಗೆ ಲಭ್ಯವಿರುವ 711 ಆಂಬ್ಯುಲೆನ್ಸ್ (108 ವಾಹನ) ಗಳಲ್ಲಿಎಂಜಿನ್ ದೋಷ, ಬೋರ್ ಸಮಸ್ಯೆ ಮತ್ತು ತಾಂತ್ರಿಕ ದೋಷ, ಟೈರ್ (Tire) ಸವೆತ ಸೇರಿದಂತೆ ನಾನಾ ಕಾರಣಗಳಿಂದ
185 ರಿಂದ 190 ಆಂಬ್ಯುಲೆನ್ಸ್ಗಳು ತುಮಕೂರು (Tumakuru), ರಾಣೇಬೆನ್ನೂರು ಸೇರಿ ರಾಜ್ಯದ ನಾನಾ ಜಿಲ್ಲೆಗಳ ಗ್ಯಾರೇಜ್ ಸೇರಿದೆ. ಆದ್ದರಿಂದ ಬೇಡಿಕೆಗೆ ತಕ್ಕಂತೆ 108 ಆಂಬ್ಯುಲೆನ್ಸ್ ಸೇವೆ ದೊರಕುತ್ತಿಲ್ಲ.
ಪ್ರೈವೇಟ್ ಆಂಬ್ಯುಲೆನ್ಸ್ ಮೊರೆ:
ಗೋಲ್ಡನ್ ಅವರ್ನಲ್ಲಿ (Golden Hour) ತುರ್ತು ಚಿಕಿತ್ಸೆಗೆ ಅವಶ್ಯಕತೆ ಇರುವ ರೋಗಿಗಳನ್ನು ಸಮೀಪದ ಆಸ್ಪತ್ರೆಗೆ ಉಚಿತವಾಗಿ ಸಾಗಿಸುವ 108 ಯೋಜನೆ ರೂಪಿಸಲಾಗಿದ್ದು, ಹೆಚ್ಚು ವಾಹನಗಳು
ಗ್ಯಾರೇಜ್ ಸೇರಿದ್ದು, ಸಕಾಲದಲ್ಲಿ ಸೇವೆ ಸಿಗುತ್ತಿಲ್ಲ. ಘಟನೆ ಸ್ಥಳದಿಂದ 108ಗೆ ಮಾಹಿತಿ ನೀಡಿದಾಗ, ಆ ಭಾಗದಲ್ಲಿಅಂಬ್ಯುಲೆನ್ಸ್ ಅಲಭ್ಯವಾಗಿದ್ದರೆ, ಆ ತಾಲೂಕಿಗೆ ಹೊಂದಿಕೊಂಡ ಗಡಿ ತಾಲೂಕಿಗೆ
ಮಾಹಿತಿ ನೀಡಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಹಾಗಾಗಿ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸೇವೆ ಸಿಗದ ಕಾರಣ ರೋಗಿಗಳನ್ನು ಉಳಿಸಿಕೊಳ್ಳಲು, ದುಬಾರಿ ಹಣ ಕೊಟ್ಟು ಖಾಸಗಿ ಆಂಬ್ಯುಲೆನ್ಸ್ ಮೊರೆ ಹೋಗುತ್ತಿದ್ದಾರೆ. ಅಷ್ಟು ಹಣ ಹೊಂದಿಸಲಾಗದ
ಬಡ ವರ್ಗದ ರೋಗಿಗಳು ದೂರದ ಪ್ರದೇಶದಿಂದ 108 ಆಂಬ್ಯುಲೆನ್ಸ್ ಬರುವವರೆಗೂ ನೋವಿನಲ್ಲಿಯೇ ನರಳಾಡುವ ಸ್ಥಿತಿಯೂ ಉಂಟಾಗಿದೆ.
ಇದನ್ನು ಓದಿ: ರೋಗಿಗಳ ಗೋಳಾಟ: 190ಕ್ಕೂಅಧಿಕ 108 ಆಂಬ್ಯುಲೆನ್ಸ್ಗಳು ಗ್ಯಾರೇಜ್ ಸೇರ್ಪಡೆ, ಸೇವೆ ಸಿಗದೆ ರೋಗಿಗಳ ಪರದಾಟ
- ಭವ್ಯಶ್ರೀ ಆರ್.ಜೆ