ಅಜೀರ್ಣ, ಹುಳಿತೇಗಿನ ಸಮಸ್ಯೆ ಇದೆಯೇ? ಹಾಗಾದರೆ ಇಲ್ಲಿದೆ ಸುಲಭ ಮನೆಮದ್ದು. ಇದನ್ನು ನಮ್ಮ ಅಡಿಗೆ ಮನೆಯಲ್ಲಿಯೇ ತಯಾರಿಸಬಹುದು. ಓಂ ಕಾಳು ಎಲ್ಲರಿಗೂ ಗೊತ್ತೇ ಇರುತ್ತದೆ. ಇದು ಹೊಟ್ಟೆಯ ಸಮಸ್ಯೆಗಳಿಗೆ ಓಂ ಕಾಳು ರಾಮಬಾಣ ಎನ್ನಬಹುದು. ಈ ಓಂ ಕಾಳನ್ನು ಹುರಿದು ಪುಡಿಮಾಡಿ ಇಟ್ಟುಕೊಳ್ಳಬೇಕು. ಹೊಟ್ಟೆಗೆ ಸಂಬಂಧಿಸಿದ ಯಾವುದದೇ ಸಮಸ್ಯೆ ಕಂಡು ಬಂದರೂ ತಕ್ಷಣ ಓಂಕಾಳು ಕಷಾಯ ಮಾಡಿ ಕುಡಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಅಜೀರ್ಣ, ಹುಳಿತೇಗು ಎಲ್ಲಾ ಮಾಯವಾಗುವುದಂತು ಖಂಡಿತ. ಇನ್ನು ಓಂ ಕಾಳನ್ನು ನೀರಲ್ಲಿ ರಾತ್ರಿ ನೆನೆಸಿಟ್ಟು ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಕುಡಿದು ನೋಡಿ. ಹೊಟ್ಟೆ ಉಬ್ಬರದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗುವುದು. ಸಣ್ಣ ಮಕ್ಕಳಿಂದ ವಯಸ್ಕರವರೆಗೂ ಈ ಮನೆ ಮದ್ದು ಬಹಳ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಬೊಜ್ಜು ಕರಗುವಲ್ಲೂ ಇದು ಸಹಕಾರಿಯಾಗಿದೆ.