ನಟ ಪುನೀತ್ ರಾಜ್ಕುಮಾರ್ರವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ.ಅಕ್ಟೊಬರ್ 29ರಂದು ಹೃದಯಾಘಾತದಿಂದ ನಿಧನರಾದರು.
ಪುನೀತ್ ರಾಜ್ಕುಮಾರ್ರವರು ಚಿತ್ರರಂಗದ ಜೊತೆಗೆ ನಾಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಅವರಿಗೆ ಮುರುಘಾ ಮಠದ ಪೀಠಾಧಿಪತಿ ಡಾ ಶಿವಮೂರ್ತಿ ಮುರುಘಾ ಶರಣರು 2020-21ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಪ್ರಶಸ್ತಿಯನ್ನು ಮುಂಬರುವ ಬಸವ ಜಯಂತಿಯಂದು ಶ್ರೀಮತಿ ಅಶ್ವಿನಿ ಪುನೀತ್ ರಾಜ್ಕುಮಾರ್ ಇವರಿಗೆ ನೀಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ನೀಡುವ ಅತೀ ಉನ್ನತ ಪ್ರಶಸ್ತಿಗಳಲ್ಲಿಈ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ ಕೂಡ ಒಂದಾಗಿದೆ .ಇದು 5 ಲಕ್ಷ ನಗದು, ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ.
ನಟ ಪುನೀತ್ ರಾಜ್ಕುಮಾರ್ರವರು ನಮ್ಮೆಲ್ಲರನ್ನು ಅಗಲಿ 6 ದಿನಗಳಾದರೂ ಇನ್ನೂ ಆ ಅಗಲಿಕೆ ನಂಬಲು ಅಸಾಧ್ಯವಾಗಿದೆ.