ಕಳೆದ ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮಿ ಶಿಬರೂರು ನೇತೃತ್ವದ ವಿಜಯ ಟೈಮ್ಸ್ ಕವರ್ ಸ್ಟೋರಿ ತಂಡ ಚಿತ್ರದುರ್ಗದಲ್ಲಿರು ಖೋಟಾ ನೋಟು ಅಡ್ಡೆಯಲ್ಲಿ ಸ್ಟಿಂಗ್ ಆಪರೇಷನ್ ನಡೆಸಿತ್ತು. ಈ ಕಾರ್ಯಚರಣೆಯು ರಾಜ್ಯಾದ್ಯಂತ ಸಾಕಷ್ಟು ಸಂಚಲನವನ್ನು ಮೂಡಿಸಿತ್ತು. ಈ ದಂಧೆಯನ್ನು ವಿಜಯ ಟೈಮ್ಸ್ ತಂಡ ಬಯಲು ಮಾಡಿದ ಬೆನ್ನಲ್ಲೇ ಚಿತ್ರದುರ್ಗ ಪೊಲೀಸರು ಖೋಟಾ ನೋಟು ದಂಧೆಯ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗ ನಗರಸಭೆಯ ಸದಸ್ಯನಾಗಿರುವ ಚಂದ್ರಶೇಖರ್ ಅಲಿಯಾಸ್ ಖೋಟಾ ನೋಟು ಚಂದ್ರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯ ಟೈಮ್ಸ್ ಕವರ್ ಸ್ಟೋರಿ ಕಾರ್ಯಚರಣೆ : ಬ್ಲ್ಯಾಕ್ ಮನಿ ವೈಟ್ ಮಾಡಿ ಕೊಡ್ತೀವಿ ಅಂತ ಹೇಳೋದು ಇವರ ಮೈನ್ ಟ್ರಿಕ್. ಇದೇ ಕತೆ ಹೇಳಿ ಅನೇಕರಿಗೆ ಮೋಸ ಮಾಡಿ ಅವರಿಂದ ಕೋಟ್ಯಾಂತರ ಲೂಟಿ ಮಾಡಿದೆ ಈ ಗ್ಯಾಂಗ್. ಈ ಗ್ಯಾಂಗ್ನ ಮೋಸಕ್ಕೆ ಬಲಿಯಾದ ಅಮಾಯಕ ನಾಗರಾಜ್ ವಿಜಯಟೈಮ್ಸ್ನ ಕವರ್ಸ್ಟೋರಿ ತಂಡವನ್ನು ಭೇಟಿ ಮಾಡಿದ್ರು. ಅವರು ಈ ಗ್ಯಾಂಗ್ ಮಾಡೋ ಮೋಸದ ಕತೆಯನ್ನು ವಿವರಿಸಿದ್ರು.
ಮನೆಯಲ್ಲಿ ಈ ಗ್ಯಾಂಗ್ ನಡೆಸುತ್ತಿದ್ದ ಕಳ್ಳ ದಂಧೆಗೆ ಪೂರಕವಾದ ದಾಖಲೆಗಳು ಸಿಕ್ಕಿದವು. ಇಷ್ಟಕ್ಕೆ ನಿಲ್ಲದ ಚಿತ್ರದುರ್ಗ ಪೊಲೀಸರು ಗ್ಯಾಂಗ್ ಸದಸ್ಯರ ಬೆನ್ನು ಹತ್ತಿದರು, ಗ್ಯಾಂಗ್ನ ಪ್ರಮುಖ ಆರೋಪಿ ಮೂರ್ತಿ ಹಾಗೂ ನವೀನನ್ನು ಬಂಧಿಸಿ ಜೈಲಿಗೆ ಅಟ್ಟಿದರು.ಇನ್ನು ಹಲವರಿಗೆ ಬಲೆ ಬೀಸಿದ್ದರು.
ಆದ್ರೆ ವಿಜಯ ಟೈಮ್ಸ್ನ ಕವರ್ ಸ್ಟೋರಿ ತಂಡದ ಆಗಮನದ ಮಾಹಿತಿ ಗೊತ್ತಾದ ಖದೀಮರು ಅಲ್ಲಿಂದ ಕಾಲ್ಕಿತ್ತರು. ಆದ್ರೆ ಇಷ್ಟಕ್ಕೆ ಆ ಗ್ಯಾಂಗನ್ನು ಬಿಡದ ಪೊಲೀಸರ ತಂಡ ಮೋಸ ಮಾಡಿರುವ ಬಗ್ಗೆ ದೂರು ದಾಖಲಿಸಿದ್ರು. ನ್ಯಾಯಾಲಯದ ಆದೇಶ ಪಡೆದು ಮೋಸ ಮಾಡಲು ಬಳಸುತ್ತಿದ್ದ ಮನೆಗೆ ನುಗ್ಗಿಯೇ ಬಿಟ್ರು.ಬೀಗ ಒಡೆದು ಚಂದ್ರು ಗ್ಯಾಂಗ್ನ ಹೆಡೆ ಮುರಿ ಕಟ್ಟಲು ಸಿದ್ಧರಾಗಿದ್ದರು. ವಿಜಯ ಟೈಮ್ಸ್ ದಾಳಿ ನಡೆಸಿದ 2 ವಾರದ ಒಳಗೆ ಚಿತ್ರದುರ್ಗ ಪೊಲೀಸರು ಪ್ರಮುಖ ಆರೋಪಿಯಾದ ಚಂದ್ರಶೇಖರ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.