ಅನಂತ್ ನಾಗ್ ನಟರಷ್ಟೇ ಅಲ್ಲ, ಭಾರತೀಯ ಚಿತ್ರರಂಗ ಅಭಿಜ್ಞಾ: ಹಿರಿಯ ನಟನಿಗೆ ಪದ್ಮ ಪ್ರಶಸ್ತಿ ಅಭಿಯಾನ ಬೆಂಬಲಿಸಿದ ನಟ ಯಶ್

ಬೆಂಗಳೂರು, ಜು. 21: ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬ ಅಭಿಯಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಬೆಂಬಲಿಸಿದ್ದು, “ಅನಂತ್ ನಾಗ್ ಕರ್ನಾಟಕದ ಹೆಮ್ಮೆ, ಭಾರತೀಯ ಚಿತ್ರರಂಗ ಅಭಿಜ್ಞಾ” ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಕಿ ಭಾಯ್, ಅಭಿನಯ ಎನ್ನುವುದು ವರ್ತನೆ ಎಂದು ಅನಂತ್ ನಾಗ್ ಅವರು ಒಮ್ಮೆ ಹೇಳಿದ್ದರು. ಆ ಮಾತು ನನ್ನಲ್ಲಿ ಇನ್ನು ಉಳಿದಿದೆ. ಅವರ ಹಾಸ್ಯ ಪ್ರಧಾನ ಸಿನಿಮಾಗಳನ್ನು ನೋಡಿ ನಕ್ಕವನು ನಾನು ಬೆಳೆದವನು ನಾನು. ಅವರ ಅತ್ತಾಗ ನನ್ನ ಕಣ್ಣು ಸಹ ಒದ್ದೆಯಾಗಿತ್ತು. ಆ ಮಹಾನ್ ಕಲಾವಿದನ ಜೊತೆ ನಟಿಸಬೇಕು ಎನ್ನುವ ಹಂಬಲ ಎಂದೆಂದಿಗೂ ಇರಲಿದೆ” ಎಂದು ನಟ ಯಶ್ ಅನಂತ್ ನಾಗ್ ಅವರೊಂದಿಗೆ ಇರುವ ಫೋಟೋ ಹಾಕಿಕೊಂಡು ಕನ್ನಡ ಚಿತ್ರರಂಗದ ಹಿರಿಯ ನಟನಿಗೆ ಪದ್ಮ ಪ್ರಶಸ್ತಿ ಸಿಗಬೇಕೆಂಬ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

ಅಲ್ಲದೇ, ಅವರ ಸಿನಿಮಾಗಳು ಇಂದಿಗೂ ಪ್ರಸ್ತುತ. ಕಿರುತೆರೆ ಯಿಂದ ಹಿಡಿದು ನನ್ನ ಸಿನಿಮಾ ಪಯಣದ ಆರಂಭದ ದಿನಗಳಿಂದಲೂ ಈ ಅದ್ಭುತ ಕಲಾವಿದನ ಜೊತೆ ನಟಿಸುವ ಅದೃಷ್ಟ ನನಗೆ ಸಿಕ್ಕಿದೆ. ಅನಂತ್ ನಾಗ್ ಅವರ ಅಪಾರ ಜ್ಞಾನ ನನಗೆ ಪ್ರೇರಣೆಯಾಗಿದೆ. ಅನಂತ್ ನಾಗ್ ಕರ್ನಾಟಕ ಹೆಮ್ಮೆ. ಅವರು ಕೇವಲ ನಟರಲ್ಲ ಅವರು ಭಾರತೀಯ ಸಿನಿಮಾರಂಗದ ಅಭಿಜ್ಞಾ. ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು? ಎಂದು ಪ್ರಶ್ನಿಸಿದ್ದಾರೆ.

Exit mobile version